Categories: featureNewsPolitics

ಮೈಸೂರಿನಲ್ಲಿ ಡಿಸೆಂಬರ್ 12 ಮತ್ತು 13, 2023 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೇಯಲ್ಲಿ ಅಂಗೀಕರಿಸಲಾದ ನಿರ್ಣಯಗಳು.

  1. ಅನುಪಾತೀಯ ಪ್ರಾತಿನಿಧ್ಯ ಹಾಗೂ ಕ್ಷೇತ್ರಗಳ ನ್ಯಾಯಯುತ ವಿಂಗಡನೆ ಜಾರಿಯಾಗಲಿ

ಜನಸಂಖ್ಯಾ ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ ನೀಡುವ ತತ್ವವನ್ನು ಅನುಸರಿಸಲು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತುರ್ತಾಗಿ ಒಮ್ಮತಕ್ಕೆ ಬರಬೇಕು ಎಂದು SDPI ಬಲವಾಗಿ ಒತ್ತಾಯಿಸುತ್ತದೆ. SDPI, ರಚನೆಯಾದಾಗಿನಿಂದಲೂ ಭಾರತದಲ್ಲಿ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಪದೇ ಪದೇ ಅಭಿಪ್ರಾಯಪಡುತ್ತಲೇ ಬಂದಿದೆ. ನ್ಯಾಯಯುತ ಮತ್ತು ಸಮಾನ ಹಕ್ಕುಗಳ ಜಾರಿಯನ್ನು ಸಾಧಿಸಲು ಮತ್ತು ಜನ್ಮದ ಆಧಾರದ ಮೇಲೆ ಜನರ ಜೀವನದ ಪ್ರತಿ ಹಂತದಲ್ಲೂ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಹಕ್ಕುಗಳನ್ನು ನಿರ್ಧರಿಸುವ ಭಾರತದ ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಂದು ಪ್ರಜೆಯ ನ್ಯಾಯಯುತ ಹಾಗೂ ಸಮಾನತೆಯ ಹಕ್ಕುಗಳನ್ನು ಮತ್ತು ಅವರ ನ್ಯಾಯಯುತ ಪಾಲನ್ನು ಒದಗಿಸಿಕೊಡುವುದನ್ನು ಖಚಿತಪಡಿಸಿಕೊಳ್ಳಲು ಅನುಪಾತದ ಆಧಾರದ ಪ್ರಾತಿನಿಧ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು SDPI ಪ್ರಾರಂಭ ದಿಂದಲೇ ನಿರಂತರ ಆಗ್ರಹಿಸುತ್ತ ಬಂದಿದೆ. ಸಮಾಜದಲ್ಲಿ ಸಾಮಾಜಿಕವಾಗಿ ದುರ್ಬಲರಾಗಿರುವ ಅಥವಾ ರಾಜಕೀಯವಾಗಿ ಅಸಂಘಟಿತ ವರ್ಗಗಳ ಕೊರತೆಗಳು, ತಾರತಮ್ಯ ಮತ್ತು ಶೋಷಣೆಯನ್ನು ಗುರುತಿಸಲು, ಸಾಮಾಜಿಕ ಪಂಗಡಗಳು, ಜಾತಿ ಮತ್ತು ಸಮುದಾಯ ಅನಾದಿ ಕಾಲದಿಂದಲೂ ಗುರುತಿಸಬಹುದಾದ ಏಕೈಕ ಮಾರ್ಗ ಜನಸಂಖ್ಯಾ ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ.

ಜಾತಿ ಗಣತಿಯು ಆಳವಾಗಿ ಬೇರೂರಿರುವ ಅನ್ಯಾಯದ ಮನಸ್ಥಿತಿಯನ್ನು ತೊಡೆದುಹಾಕಲು ಮತ್ತು ಭಾರತೀಯ ರಾಜಕೀಯದಲ್ಲಿ ಪೂರ್ಣ ನ್ಯಾಯವನ್ನು ಸಾಧಿಸಲು ಮತ್ತು ಕಾನೂನು ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನನ್ನು ಸಮಾನ ಹಾದಿಯಲ್ಲಿ ಇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲ ಹೆಜ್ಜೆಯಾಗಿದೆ. ಎಲ್ಲರಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದಲ್ಲಿ ಪ್ರಕ್ರಿಯೆಯಲ್ಲಿ ಸಮಾನ ಪಾಲನ್ನು ಒದಗಿಸುವ ವಿಧಾನವಾಗಿರುವಂತಹ ‘ ಅನುಪಾತ ಆಧಾರಿತ ಪ್ರಾತಿನಿಧ್ಯ ‘ ವ್ಯವಸ್ಥೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕಾಗಿದೆ. ಸಮಾನತೆಯ ರಾಜಿರಹಿತ ಜಾರಿಯಿಂದ ದೇಶದಲ್ಲಿ ಮತ್ತು ಸಮಾಜದಲ್ಲಿ ಖಂಡಿತವಾಗಿಯು ನ್ಯಾಯ ಹಾಗೂ ಶಾಂತಿಯನ್ನು ಶಾಶ್ವತವಾಗಿ ಸ್ಥಾಪಿಸುತ್ತದೆ.

ಮೊಹಮ್ಮದ್ ಇಲಿಯಾಸ್ ತುಂಬೆ
(ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago