ಅಪ್ಪು ನೆನಪುಅಕ್ಟೋಬರ್ 29ಇಂದಿಗೆ ಪುನೀತ್ ರಾಜ್ ಕುಮಾರ್ ಅವರು ಅಗಲಿ ಒಂದು ವರ್ಷವೇ ಕಳೆಯಿತು.ಅಪ್ಪು ಒಬ್ಬ ಸಿನಿಮಾ ನಟನ ಆಚೆಗೆ ಒಬ್ಬ ವ್ಯಕ್ತಿಯಾಗಿ, ಮಾತು ಕೃತಿಯಲ್ಲಿ ಯಾರನ್ನು ನೋಯಿಸದೆ, ಯಾರನ್ನು ದ್ವೇಷಿಸದೆ, ಜಾತಿ ಧರ್ಮ ಎಂದು ಮಾತನಾಡದೆ, ಭೇದಭಾವ ತೋರದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ದಾನ ಮಾಡಿದ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡ ಎಲ್ಲೋ ಅದರ ಹಮ್ಮು ಬಿಮ್ಮು ತೋರಿಸದ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿ ಜಾತಿ ಧರ್ಮಗಳ ಆಚೆಗೆ, ಬಡತನ ಶ್ರೀಮಂತಿಕೆ ಆಚೆಗೆ ಬದುಕಿ ಹೋಗಿದ್ದಾರೆ.ಪುನೀತ್ ರಾಜ್ ಕುಮಾರ್ ಅವರಂತಹ ವ್ಯಕ್ತಿತ್ವವನ್ನು ಪಡೆದ ನಮ್ಮ ರಾಜ್ಯದಲ್ಲಿ ಜನ ಇನ್ನೂ ದ್ವೇಷ, ಹಗೆ, ಜಾತಿ, ಧರ್ಮ ಎಂದು ದಿನಬೆಳಗಾದರೆ ಅದರಲ್ಲೇ ಮಿಂದೇಳುತ್ತಿರುವುದು ಬೇಸರದ ಸಂಗತಿಯಾಗಿದೆ.~ ಅಬ್ದುಲ್ ಮಜೀದ್ ಮೈಸೂರು,ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ ಕರ್ನಾಟಕ