ಪ್ರಶ್ನಿಸುವವರನ್ನು ಈ ಸರ್ಕಾರ ಬಂಧಿಸುವುದು, ಹಿಂಸಿಸುವುದು, ಇಡಿ, ಸಿಬಿಐ ಯಂತಹ ಸಂಸ್ಥೆಗಳನ್ನು ಬಳಸಿ ಹೆದರಿಸುತ್ತಾರೆ, ಅದೂ ಆಗಲಿಲ್ಲ ಅಂದರೆ ಎನ್ಕೌಂಟರ್ ಮಾಡಿ ಮುಗಿಸುತ್ತಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ ಇಂಗ್ಲೀಷಿನಲ್ಲಿ ಹೊರಡಿಸುವ ಅಯೋಗ್ಯರು ಹಿಂದಿ ಹೇರಿಕೆ ಮಾಡಿ ಕನ್ನಡವನ್ನು ಕೊಲ್ಲುತ್ತಾ ಇದ್ದಾರೆ.
ರಾಜ್ಯಸಭೆಗೆ ಕರ್ನಾಟಕದಿಂದ ಹೋಗುವ ವ್ಯಕ್ತಿ ಕನ್ನಡಿಗರೇ ಆಗಿರಬೇಕು ಎನ್ನುವ ಕಾನೂನು ಬರಬೇಕು. ನಿರ್ಮಲ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಆರಿಸಿದರು. ಅದರಿಂದ ಕರ್ನಾಟಕಕ್ಕೆ ಏನು ಲಾಭವಾಗಿದೆ?
ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಂದರೆ ಕೇವಲ ಬಿಜೆಪಿಗರಿಗೆ ಮಾತ್ರ ಅವರು ಜವಾಬ್ದಾರರಲ್ಲ, ಎಲ್ಲ ಜನರ ಸಮಸ್ಯೆಗೂ ಸ್ಪಂದಿಸಬೇಕು.
ಟಿಪ್ಪು ಶವವನ್ನು ನೋಡಿ ಬ್ರಿಟಿಷರು “ಇಂದು ಭಾರತ ನಮ್ಮದಾಯಿತು” ಎಂದು ಹೇಳಿದ್ದರು. ಟಿಪ್ಪುವಿನ ಶೌರ್ಯ ಅಂತದ್ದು. ಸ್ವಾಭಿಮಾನಕ್ಕಾಗಿ ತನ್ನ ಮಕ್ಕಳನ್ನ ಒತ್ತೆ ಇಟ್ಟ ವೀರ ಟಿಪ್ಪು. ಮದ್ಯಪಾನ ಜಾರಿಗೆ ತಂದರೆ ಹೆಚ್ಚಿನ ಆದಾಯ ಬರುತ್ತೆ. ನಿಮ್ಮ ಮಕ್ಕಳನ್ನ ಬೇಗ ಬಿಡಿಸಿಕೊಳ್ಳಬಹುದು ಎಂದಾಗ ಟಿಪ್ಪು ‘ನನ್ನ ಮಕ್ಕಳಿಗಾಗಿ ರಾಜ್ಯದ ಮಕ್ಕಳನ್ನ ಹಾಳು ಮಾಡುವುದಿಲ್ಲ’ ಎಂದಿದ್ದ.