ವಿಕಲಚೇತನರ ಹೋರಾಟಕ್ಕೆ SDPI ಬೆಂಬಲ :
ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ
ಸಾಂಸ್ಕೃತಿ ನಗರ ಮೈಸೂರಿನಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಅಕ್ರಮವಾಗಿ ನೀರಿನ ಟ್ಯಾಂಕನ್ನು ನಿರ್ಮಿಸುತ್ತಿರುವ ಸರ್ಕಾರದ ಅವೈಜ್ಞಾನಿಕ ನಡೆಯನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡುತ್ತಿದ್ದ ವಿಕಲಚೇತನರಿಗೆ ನೈತಿಕ ಬೆಂಬಲ ನೀಡಿ ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಅಬ್ದುಲ್ ಮಜೀದ್ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತ ವಿಕಲಚೇತನರು ತಮ್ಮ ಬದುಕನ್ನು ಸಾರಗವಾಗಿ ನಡೆಸುವುದು ಕಷ್ಟ. ಅದುದರಿಂದಲ್ಲೇ ವಿಕಲಚೇತನರ ಹಕ್ಕುಗಳಿಗಾಗಿ ಮತ್ತು ಅವರ ರಕ್ಷಣೆಗಾಗಿ ಕಾಯಿದೆ, ನೀತಿ ನಿಯಮಗಳಿವೆ. ಇದೆಲ್ಲವನ್ನು ಗಾಳಿಗೆ ತೋರಿ ಅಕ್ರಮವಾಗಿ ನೀರಿನ ಟ್ಯಾಂಕ್ ಕಾಮಗಾರಿ ಮಾಡುತ್ತಿರುವುದು ಘೋರ ದೌರ್ಜನ್ಯವಾಗಿದೆ. ವಿಕಲಚೇತನರಿಗೆ ತೊಂದರೆ ನೀಡಿ ಈ ಕಾಮಗಾಲ ಮುಂದುವರಿಸುವುದು ಸರಿಯಾದ ಕ್ರಮವಲ್ಲ. ಇದನ್ನು ತಕ್ಷಣ ನಿಲ್ಲಿಸ ಬೇಕು ಎಂದು ಮಜೀದ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಮ್ಮದ್ ಖಾನ್, ಮೈಸೂರು ಜಿಲ್ಲಾಧ್ಯಕ್ಷರಾದ ರಫತ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಫಿ ಉಲ್ಲಾ, ವಾರ್ಡ್ ಸಂಖ್ಯೆ 35 ರ ವಾರ್ಡ್ ಅಧ್ಯಕ್ಷರಾದ ನಸ್ರುಲ್ಲಾ, ಹಾಗೂ ಸಾಮಾಜಿಕ ಹೋರಾಟಗಾರರಾದ ನಂಜರಾಜ ಅರಸು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI, ಕರ್ನಾಟಕ WeStandWithPriyankKharge
Remembering Dr. A.P.J. Abdul Kalam, former President of India and the Missile Man of India,…
ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮೌಲವಿ ಆಮಿರ್ ಖಾನ್ ಮುತ್ತಾಕಿ ಅವರ ಭಾರತ ಭೇಟಿಯು ಒಂದು ಉತ್ತಮ ಬೆಳವಣಿಗೆ.…
~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು…
~ಅಬ್ದುಲ್ ಮಜೀದ್, ರಾಜ್ಯ ಅಧ್ಯಕ್ಷರು, SDPI, ಕರ್ನಾಟಕhttps://www.facebook.com/share/p/1DURz4sWBM/