ರಾಜ್ಯದಲ್ಲಿ ಕೋಮು ಹಿಂಸಾಚಾರ ತಡೆಗಟ್ಟಲು ಸೋನಿಯಾ ಗಾಂಧಿ ನೇತೃತ್ವದ ಸಮಿತಿ 2005 ರಲ್ಲಿ ಶಿಫಾರಸು ಮಾಡಿದ್ದ ಕರಡು ಮಸೂದೆಯನ್ನು ಕಾನೂನು ಮಾಡಿ: ಮುಖ್ಯಮಂತ್ರಿಗೆ ಎಸ್ಡಿಪಿಐ ಪತ್ರ.
ಬೆಂಗಳೂರು, 04 ಜೂನ್ 2023: ಮಂಗಳೂರಿಗೆ ಸೀಮಿತವಾಗಿ ಕೋಮುವಾದಿ ವಿರೋಧಿ ವಿಭಾಗ ಆರಂಭಿಸಿದ್ದೀರಿ ಆದರೆ ಅದು ಎಷ್ಟು ಪರಿಣಾಮಕಾರಿಯಾಗಿರಲಿದೆ ಎಂಬ ಬಗ್ಗೆ ಅನುಮಾನಗಳಿವೆ. ಹಾಗಾಗಿ ಅದಕ್ಕಾಗಿ ಪ್ರತ್ಯೇಕ ವಿಭಾಗ ರಚಿಸುವ ಬದಲು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ಕಾಯ್ದೆಯನ್ನೇ ಜಾರಿಗೆ ತಂದರೆ ಕೋಮುಗಲಭೆ ಮತ್ತು ಗುಂಪು ದಾಳಿ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಸಲಹೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಎಸ್ಡಿಪಿಐ ಪತ್ರದ ಮೂಲಕ ಸಲಹೆ ನೀಡಿದೆ.
ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಸೋನಿಯಾ ಗಾಂಧಿಯವರ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ 2005 ಒಂದು ಕರಡು ಮಸೂದೆ (Prevention of communal and Targeted Violence) ಯನ್ನು ಶಿಫಾರಸು ಮಾಡಿತ್ತು. ಆ ಕರಡು ಮಸೂದೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಅದನ್ನೇ ಈಗ ರಾಜ್ಯದಲ್ಲಿ ಕಾಯಿದ ಮಾಡುವುದರಿಂದ ಕೋಮುವಾದದ ವಿರುದ್ಧ ಬಲಿಷ್ಠ ಕಾನೂನೊಂದು ಜಾರಿಗೆ ತಂದಂತಾಗುತ್ತದೆ ಎಂದಿರುವ ಮಜೀದ್ ಅವರು, ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುತ್ತೇವೆ ಎಂದು 2013 ರ ನಿಮ್ಮ ಕಾಂಗ್ರೆಸ್ ಪಕ್ಷದ ಪುಣಾಳಿಕೆಯಲ್ಲಿ ಘೋಷಣೆ ಕೂಡಾ ಮಾಡಿದ್ದೀರಿ ಎಂಬುವುದನ್ನು ಪತ್ರದಲ್ಲಿ ನೆನಪಿಸಿದ್ದಾರೆ.
ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ ಆನೇಕಲ್:ಸೆ. 17:ಸಾಮಾಜಿಕ ನ್ಯಾಯ, ಸಮಾನತೆ,…
13 ಸೆಪ್ಟೆಂಬರ್ 2026ಪಾಲನ ಭವನ , ಬೆಂಗಳೂರು WIM
5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh
Prakash Raj, Abdul Majeed SDPI and several others detained by Bengaluru Police During Election Commission…
SDPIKarnataka #NepalFloods
ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…