Categories: featureNewsPolitics

ಹುಬ್ಬಳ್ಳಿ ನಗರದ ರೈಲ್ವೆ ಸ್ಟೇಷನ್ ಹತ್ತಿರ ಇರುವ ರಾಜಗೋಪಾಲ್ ನಗರದ ದಲಿತ ಸಮಾಜದ (ಮಾದಿಗ) ಕಾಲೋನಿಗೆ SDPI ಪಕ್ಷದ ನಿಯೋಗ ಭೇಟಿ ನೀಡಿತು. ತಂಡದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಆರ್ ಭಾಸ್ಕರ್ ಪ್ರಸಾದ್, ಅಪ್ಸರ್ ಕೊಡ್ಲಿಪೇಟೆ, ಯಮುನಪ್ಪ ಗುಣದಾಳ, ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಡಾ. ವಿಜಯ್ ಗುಂಟ್ರಾಳ ಅವರು ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. ಸುಮಾರು 120 ವರ್ಷಗಳಿಂದ ಇಲ್ಲಿ ನಲೆಸಿರುವ ಈ ಕುಟುಂಬಗಳಿಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸರಿಂದ ಕೀರುಕುಳವಾಗುತ್ತಿದೆ. ಮತ್ತು ಅಲ್ಲಿ ಇರುವ ಶಾಲೆಯ ಬಗ್ಗೆ ಕಾಳಜಿಯ ಕೊರತೆ ಹಾಗು ಮೂಲಭೂತ ಸೌಲಭ್ಯಗಳ ನಿರಾಕರಣೆ ಆಗಿದೆ. ಹುಬ್ಬಳ್ಳಿ ನಗರ ರೈಲ್ವೆ ನಿಲ್ದಾಣದ ಪಕ್ಕದ ರಾಜಗೋಪಾಲನಗರ ಮಾದಿಗರ ಕಾಲೋನಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ 90 ಜನ ವಿದ್ಯಾರ್ಥಿಗಳಿಗೆ ಕೇವಲ ಒಬ್ಬೇ ಒಬ್ಬ ಮಾಸ್ಟರ್ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಯಿತು.

admin

Recent Posts

Condolences

It is with deep sorrow that I have learned the news of the demise of…

23 hours ago