Categories: featureNewsPolitics

ಟಿಪ್ಪು ಜಯಂತಿ ಮತ್ತು ಕಾಂಗ್ರೆಸ್ನ ಕೃತಘ್ನ ನಾಯಕರು:-

ನಿನ್ನೆ ನವಂಬರ್ 10, ಭಾರತದ ಪ್ರಥಮ ಸ್ವಾತಂತ್ರ್ಯ ಸೇನಾನಿ, ವಿಶ್ವ ವಿಖ್ಯಾತ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜನ್ಮದಿನ, ಕನ್ನಡದ ಮಣ್ಣು ದೇವನಹಳ್ಳಿಯಲ್ಲಿ ಹುಟ್ಟಿದ ಅತ್ಯಂತ ದೂರದೃಷ್ಟಿಯ ಆಡಳಿತಗಾರ, ಜನಾನುರಾಗಿ, ಹಲವು ಕ್ರಾಂತಿಕಾರಿ ಆಡಳಿತ ಸುಧಾರಣೆಯನ್ನು ತಂದ ಟಿಪ್ಪು ಸುಲ್ತಾನ್ ಜಯಂತಿಯನ್ನು 2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸರ್ಕಾರಿ ಕಾರ್ಯಕ್ರಮವಾಗಿ ಆಯೋಜನೆ ಮಾಡಿತ್ತು.
ಆದರೆ ದುರಂತ ನೋಡಿ, ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿಯ ಟ್ವಿಟರ್ ಹ್ಯಾಂಡಲ್ X ಅನ್ನು ನೋಡುತ್ತಿದ್ದೆ, ಅಲ್ಲಿ ಒನಕೆ ಓಬವ್ವ ಜಯಂತಿಯ ಶುಭಾಶಯ ಇದೆ, ಕುವೆಂಪುರವರ ಪುಣ್ಯ ಸ್ಮರಣೆಯ ಸಂದೇಶ ಇದೆ, ಆದರೆ ಟಿಪ್ಪು ಜಯಂತಿಯ ಬಗ್ಗೆ ಒಂದು ಸಣ್ಣ ಶುಭಾಶಯ ಇಲ್ಲ.
ಈ ಬಾರಿ ಕಾಂಗ್ರೆಸ್ ಪಡೆದ ಒಟ್ಟು ಮತದಲ್ಲಿ ಶೇಕಡ 30ರಷ್ಟು ಮುಸಲ್ಮಾನರ ಮತ, ಆದರೆ ಟಿಪ್ಪು ಸುಲ್ತಾನರ ಜಯಂತಿಯ ಶುಭಾಶಯವನ್ನು ಕೋರದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಇಷ್ಟೊಂದು ಕೃತಘ್ನರಾಗಬಾರದಿತ್ತು.
ಕನಿಷ್ಠ ಟಿಪ್ಪು ಜಯಂತಿಯ ಬಗ್ಗೆ ಒಂದು ಶುಭಾಶಯವನ್ನು ಕೂಡ ಕೋರದ ಕಾಂಗ್ರೆಸ್ ನಾಯಕರು ಇಷ್ಟೊಂದು ಹೃದಯ ಹೀನರಾಗುತ್ತಾರೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

SDPIKarnataka #TippuJayanthi #ದೇಶದಅಭಿಮಾನಟಿಪ್ಪು_ಸುಲ್ತಾನ

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago