ಭಾರತದಲ್ಲಿನ ರಾಜ್ಯಾಪಾಲರು ರಾಜಕೀಯವನ್ನು ಮೀರಿರಬೇಕು ಮತ್ತು ನಿಷ್ಪಕ್ಷಪಾತಿಗಳಾಗಿರಬೇಕು. ಆದರೆ ತೀವ್ರ ಬಲಪಂಥೀಯ ಫ್ಯಾಸಿಸ್ಟ್ ಒಕ್ಕೂಟ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲು ತಮ್ಮ ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವಿರೋಧಿ ನಡವಳಿಕೆಗಳಿಂದ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಬದಲು ವಿವಿಧ ರಾಜ್ಯಗಳಲ್ಲಿ ತಮ್ಮ ರಾಜಕೀಯ ಉನ್ನತ ನಾಯಕರ ತಾಳಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ತಮ್ಮ ಪೂರ್ವ ರಾಜಕೀಯ ನಾಯಕರ ಸಂತೋಷಕ್ಕಾಗಿ ಕೊಳಕು ರಾಜಕೀಯವನ್ನು ಮಾಡುತ್ತಿದ್ದಾರೆ ಮತ್ತು ಈ ರಾಜ್ಯಗಳಲ್ಲಿನ ಪ್ರಜಾಪ್ರಭುತ್ವ ಸರ್ಕಾರಗಳನ್ನು ಮುಜುಗರಕ್ಕೀಡುಮಾಡುತ್ತಿದ್ದಾರೆ. ಈ ಕಾರಣಕ್ಕೆ ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಮಾಡದೆ ತಡೆಹಿಡಿಯುವುದು, ಯಾವುದೇ ಕಾರಣವಿಲ್ಲದೆ ಮಸೂದೆಗಳನ್ನು ತಿರಸ್ಕರಿಸುವುದು ಮತ್ತು ಹಿಂದಿರುಗಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಅವರ ದುರಹಂಕಾರದ ನಿಲುವು ರಾಜಕೀಯ ಸೇಡಿನದು. ಈ ರೀತಿಯ ನಡವಳಿಕೆ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಶಾಸಕಾಂಗಕ್ಕೆ ಅಗೌರವ ಮತ್ತು ರಾಜ್ಯಗಳ ಮತದಾರರಿಗೆ ಮಾಡುವ ಅವಮಾನವಾಗಿದೆ. ಇದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಅವರ ಇಂತಹ ಕೊಳಕು ನಡವಳಿಕೆಗಳು ರಾಜ್ಯ ಸರ್ಕಾರಗಳು ನ್ಯಾಯಾಂಗದ ಮೂಲಕ ಪರಿಹಾರಗಳನ್ನು ಹುಡುಕುವಂತೆ ಮಾಡಿದೆ. ಈ ವಿಚಾರದಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಪಾಲರು ಸುಪ್ರೀಂ ಕೋರ್ಟ್ನಿಂದ ಬಲವಾದ ಆಕ್ಷೇಪಗಳನ್ನು ಕೂಡ ಪಡೆದುಕೊಂಡಿದ್ದಾರೆ.
SDPI ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವಿರೋಧಿ ನಿಲುವು ಮತ್ತು ರಾಜ್ಯಪಾಲರುಗಳ ಕೊಳಕು ರಾಜಕೀಯಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತದೆ ಮತ್ತು ರಾಜ್ಯಪಾಲರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ದೂರವಿರಬೇಕು ಮತ್ತು ತಮ್ಮ ಸಾಂವಿಧಾನಿಕ ಅಧಿಕಾರಕ್ಕೆ ಸೀಮಿತವಾಗಿ ವರ್ತಿಸಬೇಕು ಎಂದು ಒತ್ತಾಯಿಸುತ್ತದೆ. ಜೊತಗೆ ರಾಜಕೀಯ ಲಾಭಕ್ಕಾಗಿ ತಮ್ಮ ಅಧಿಕಾರದ ಕಛೇರಿಗಳನ್ನು ಪಕ್ಷದ ಕಛೇರಿಗಳಾಗಿ ಪರಿವರ್ತಿಸಿಸುವುದನ್ನು ಖಂಡಿಸುತ್ತದೆ.
Their sacrifice reminds us of the values of courage, unity, and duty that bind our…
ಅವರ ತ್ಯಾಗಗಳು ಧೈರ್ಯ, ಏಕತೆ ಮತ್ತು ಕರ್ತವ್ಯ ಎಂಬ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ. ಅವರು ಬಲಿದಾನಿಸಿದ ಭಾರತವನ್ನು ನ್ಯಾಯಸಮ್ಮತ, ಶಾಂತಿಯುತ…
ನಾನು ಸ್ವತಂತ್ರನಾಗಿದ್ದೆ, ನಾನು ಸ್ವತಂತ್ರನಾಗಿದ್ದೇನೆ ಮತ್ತು ನಾನು ಸ್ವತಂತ್ರನಾಗಿಯೇ ಇರುತ್ತೇನೆ!" ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಅಮರ ಹುತಾತ್ಮ…
The Social Democratic Party of India (SDPI) staged a protest in Gulbarga against the ongoing…
Bangalore, 21 July: Dharmasthala mein 100 se ziyada ladkiyon aur khawateen ki mashkook maut, zyadaati…