ಬೆಂಗಳೂರು, 10 ಜನವರಿ 2024: ಬಿಲ್ಕಿಸ್ ಬಾನೋ ಪ್ರಕರಣದ ಪಾತಕಿಗಳನ್ನು ಸನ್ನಡತೆ ಎಂದು ಸಬೂಬು ಹೇಳಿ ಬಿಡುಗಡೆ ಮಾಡಿದ್ದು ನೀಚ ಕೃತ್ಯ. ಗುಜರಾತ್ ಸರ್ಕಾರದ ಈ ನೀಚ ಕೃತ್ಯವನ್ನು ಮತಿಹೀನ ನಿರ್ಣಯ ಎಂದು ಜರಿದು ಎಲ್ಲ 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸುವ ಸುಪ್ರೀಂಕೋರ್ಟ್ ಕೋರ್ಟ್ ಆದೇಶ ಮೋದಿ ಸರ್ಕಾರದ ಕೋಮು ನೀತಿಗೆ ಕಪಾಳಮೋಕ್ಷ. ಈ ಆದೇಶವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಲಾಭ ಪಡೆಯಲು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುವವರ ಜೊತೆ ನಾವಿದ್ದೇವೆ ಎಂದು ತೋರಿಸಲು 2002 ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಬಿಲ್ಕಿಸ್ ಬಾನೋವನ್ನು ಅತ್ಯಾಚಾರ ಮಾಡಿ ಆಕೆಯ ಕುಟುಂಬದ 13 ಮಂದಿಯನ್ನು ಕೊಂದಿದ್ದ ಅಪರಾಧಿಗಳನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿತ್ತು. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಹೀನ ಮತ್ತು ದ್ವೇಷಭರಿತ ನಿರ್ಣಯವಾಗಿತ್ತು. ಇದಕ್ಕೆ ಇಂದು ಸುಪ್ರೀಂಕೋರ್ಟ್ ಚೀಮಾರಿ ಹಾಕಿದ್ದು ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಗೌರವವನ್ನು ಹೆಚ್ಚಿಸಿದೆ. ಇಂತಹ ಕೋಮುದ್ವೇಷ ಪ್ರೇರಿತ ಆದೇಶ ನೀಡಿದ ಗುಜರಾತ್ ಸರ್ಕಾರ ಸಾರ್ವಜನಿಕವಾಗಿ ಬಿಲ್ಕಿಸ್ ಬಾನೋ ಅವರಲ್ಲಿ ಕ್ಷಮೆ ಕೇಳಬೇಕು. ಅಲ್ಲದೆ ಇಂತಹ ನೀಚ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣರಾದ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಮಾನ, ಮರ್ಯಾದೆ ಇದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
ಗ್ಯಾರೆಂಟಿ ಸ್ಕೀಮ್ ಗಳ ಹೆಸರಲ್ಲಿ ಜನರನ್ನು ಕಚೇರಿಗಳ ಮುಂದೆ ನಿಲ್ಲಿಸಿ ರಾಜ್ಯ ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ; ಸರ್ಕಾರಗಳು ಬರೀ ಡಾಕ್ಯುಮೆಂಟ್…
ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…