feature

ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಸ್ವಾಗತಾರ್ಹ

ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಮುಂಗೇರಿ ಲಾಲ್ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ಜನರಿಗೆ, ಅದರಲ್ಲಿ ಅತಿ ಹಿಂದುಳಿದಿದ್ದ ಮುಸ್ಲಿಮರನ್ನೂ ಸೇರಿಸಿ ಶೇ. 26% ಮೀಸಲಾತಿ ಒದಗಿಸಿ ಕೊಟ್ಟವರು ಅಂದಿನ ಬಿಹಾರದ ಮುಖ್ಯ ಮಂತ್ರಿಯಾಗಿದ್ದ ಕಾರ್ಪುರಿ ಠಾಕೂರ್. ಆ ಮೂಲಕ ಕರ್ನಾಟಕದಲ್ಲಿ 2B ಮೀಸಲಾತಿಗೆ ಮತ್ತು ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಗಳಿಗೆ ಪ್ರೇರಣೆಯಾದರು. ಮುಂದೆ ಮಂಡಲ್ ಕಮಿಷನ್ ನೇಮಕಕ್ಕೂ ಇದು ಪ್ರೇರಣೆಯಾಯಿತು. ಅದೇ ಕಾರಣಕ್ಕೆ ಅಂದು RSS ನಾಯಕರು ಅವರನ್ನು ಬಹಿರಂಗವಾಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರ ತಾಯಿಯ ಬಗ್ಗೆ ಕೆಟ್ಟ, ಕೆಟ್ಟ ಘೊಷಣೆಗಳನ್ನು ಬೀದಿ, ಬೀದಿಗಳಲ್ಲಿ ಕೂಗಿದ್ದರು. ಇಂದು ಮಹಾ ಚುನಾವಣೆಯಲ್ಲಿ ಬಿಹಾರದ ಜನರ ಮತ ಸೆಳೆಯುವ ಉದ್ದೇಶದಿಂದ ಮೋದಿ ಸರ್ಕಾರ ಅವರಿಗೆ ಭಾರತ ರತ್ನ ಘೋಷಿಸಿದೆ. ಬಿಜೆಪಿಯ ತಂತ್ರ ಏನೇ ಇರಲಿ. ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಭಾರತದ ಸಾಮಾಜಿಕ ನ್ಯಾಯಕ್ಕಾಗಿ ದುಡಿ ಒಬ್ಬ ಧೀಮಂತ ವ್ಯಕ್ತಿಗೆ ಸಂದ ಗೌರವ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸ್ವಾಗತಿಸುತ್ತದೆ.

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

2 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

3 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

3 days ago

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಈ ಸ್ವಾತಂತ್ರ್ಯ ದಿನದಂದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದ…

3 days ago