ಕೆ.ಎಂ. ಶರೀಫ್ ಸಾಬ್
01.09.1964-22.12.2020
25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು ಪ್ರಶ್ನೆ ಮಾಡುವವರು ತಡೆಯುವವರು ಯಾರು ಇರಲಿಲ್ಲ. ಆಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಧ್ವನಿ ಇಲ್ಲದ ಸಮುದಾಯದ ಜೊತೆ ದೃಢವಾಗಿ ನಿಂತವರು ಕೆ.ಎಂ.ಶರೀಫ್ . ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದ ಸಮುದಾಯಗಳನ್ನು ಜಾಗೃತಿಗೊಳಿಸಿ ಸಂಘಟಿತರಾಗುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಿದರು. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿ, ಬದಲಾವಣೆಗೆ ಮುನ್ನುಡಿ ಬರೆದರು. ನಂತರದ ದಿನಗಳಲ್ಲಿ ನಾಯಕತ್ವ ಬೆಳೆಯುತ್ತಲೇ ಹೋಗಿ, ಜನಪರ ಚಳುವಳಿಗಳಲ್ಲಿ ಉನ್ನತ ಸ್ಥಾನವನ್ನು ನಿಭಾಯಿಸಿದರು. ಜವಾಬ್ದಾರಿಗಳು ಹೆಚ್ಚಾದಾಗ ಕೆ.ಎಂ.ಶರೀಫ್ ಅವರು, ಆರೋಗ್ಯ ಹದಗೆಡುತ್ತಿದ್ದ ನಡುವೆಯೂ ರಾಷ್ಟ್ರಾದ್ಯಂತ ಮುಸ್ಲಿಮರ ಮಾತ್ರವಲ್ಲ ಶತಮಾನಗಳಿಂದ ದೌರ್ಜನ್ಯಕ್ಕೊಳಗಾದ ಮತ್ತು ಮೂಲೆಗೆಸೆಯಲ್ಪಟ್ಟವರ ಕಣ್ಣೀರು ಒರೆಸುವ ಮತ್ತು ನ್ಯಾಯಕ್ಕಾಗಿ ಧ್ವನಿ ಗೂಡಿಸಿದರು. ಸಂತ್ರಸ್ತ ಜನರಲ್ಲಿ ಆತ್ಮಸ್ಥೆರ್ಯ ತುಂಬಿದರು. ಸರ್ಕಾರಗಳ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ನಡೆಗಳನ್ನು ವಿರೋಧಿಸುತ್ತಲೇ ಬಂದರು. ಸಂಘಪಾರಿವಾರದ ಸಂಚುಗಳನ್ನು, ಅದರ ಆಳ ಅಗಲಗಳನ್ನು ಜನರಿಗೆ ಪರಿಚಯಿಸಿ ಜಾಗೃತಿ ಮೂಡಿಸಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಹಿಡಿತಹೊಂದಿದ್ದ ಕೆ.ಎಂ.ಶರೀಫ್ ಸಾಬ್ ಉತ್ತಮ ಚಿಂತಕ, ಹೋರಾಟ ಗಾರ, ವಿಮರ್ಶೆಗಾರ ಮತ್ತು ಒಳ್ಳೆಯ ಭಾಷಣಗಾರ ಕೂಡ. ಹಲವು ನಾಯಕರನ್ನು ಸಮುದಾಯಕ್ಕೆ ನೀಡುವಲ್ಲಿ ಸ್ಫೂರ್ತಿದಾಯಕರೂ ಆಗಿದ್ದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಕೆ. ಎಂ. ಶರೀಫ್ ನಮ್ಮೊಂದಿಗೆ ಇಂದು ಇಲ್ಲದಿದ್ದರೂ ಅವರು ನೀಡಿದ ಮಾರ್ಗದರ್ಶನ, ತೋರಿದ ದಾರಿ, ಮೂಡಿಸಿದ ಜಾಗೃತಿ ನಮ್ಮ ಪಕ್ಷಕ್ಕೆ ಇಂದಿಗೂ ಸ್ಫೂರ್ತಿಯಾಗಿದೆ. ಅವರು ಅಗಲಿದ ಈ ದಿನದಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ.
Ambedkar Jatha-3 احتجاجی اجلاس | 15اگست Belagavi | 10:30 AM سورنا سودها مطالبات 2B ریزرویشن…
DEMAND'S MEET | 15th DECEMBER BELAGAVI 10:30 AM Suvarna Soudha DEMANDS Restore the 2B Reservation…
Ambedkar Jatha-3 Ehtijaji Ajlas BELAGAVI 10:30 AM Suvarna Soudha DEMANDS 2B Reservation ko dobara bahal…
ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 3 📍 VENUE: Kudachi | Public Program SDPIKarnataka #AmbedkarJatha3 #chalobelagavi
Ambedkar Jatha-3 BJP ಮುಸ್ಲಿಮ್ ದ್ವೇಷದ ಭಾಗವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತದೆ. ಕಾಂಗ್ರೆಸ್ ಬಿಜೆಪಿ…
SDPI Karnataka SDPI ಹಲವು ಬೇಡಿಕೆಗಳೊಂದಿಗೆ ಕಿತ್ತೂರ ಚೆನ್ನಮ್ಮಳ ಮಣ್ಣಿನಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾವನ್ನು ಆರಂಭಿಸಿ ಸುವರ್ಣ ಸೌಧಕ್ಕೆ…