KannadaPressReleases

ಪತ್ರಿಕಾ ಪ್ರಕಟಣೆ

ದುಂಡು ಮೇಜಿನ ಸಭೆ: ಜನಗಣತಿ ಮತ್ತು ಸಮೀಕ್ಷೆ ಕುರಿತ ಗೊಂದಲ ನಿವಾರಣೆಗೆ ಸಜ್ಜಾದ SDPI

ಬೆಂಗಳೂರು, ದಿನಾಂಕ: ಜೂನ್ 16:

ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಈ ನಿರ್ಣಾಯಕ ಹಂತದಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಜನಗಣತಿ ಹಾಗೂ ಅದಕ್ಕೆ ಜೊತೆಯಾಗಿ ನಡೆಯಲಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಉಂಟಾಗಿರುವ ಗೊಂದಲ ಹಾಗೂ ತೀವ್ರ ಚರ್ಚೆಗಳನ್ನು ಸಮಾಧಾನಪೂರ್ಣವಾಗಿ ಪರಿಹರಿಸಲು ಮತ್ತು ವಿಷಯದಲ್ಲಿ ಎಲ್ಲರಲ್ಲೂ ಒಮ್ಮತ ನಿರ್ಮಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಇಂದು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ನಾಯಕರು ಭಾಗವಹಿಸಿ ತಮ್ಮ ತಮ್ಮ ಚಿಂತನೆಗಳನ್ನು ಹಂಚಿಕೊಂಡರು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.

ಸಭೆಯು ಸಮಾಜವಾದ ಹಾಗೂ ಭಾರತೀಯ ಸಂವಿಧಾನದ ಪರಿಕಲ್ಪನೆಗಳನ್ನು ಆಧರಿಸಿಕೊಂಡು, ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಹಕ್ಕು, ಅಭಿವೃದ್ಧಿ ಹಾಗೂ ಪ್ರತಿನಿಧಿತ್ವಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲು ಮುಂದಿನ ಹಂತದಲ್ಲಿ ಎಲ್ಲ ಸಂಘಟನೆಗಳು, ರಾಜಕೀಯ ಹಾಗೂ ಧಾರ್ಮಿಕ ನಾಯಕರುಗಳು ಪಾಲ್ಗೊಳ್ಳುವ ಹೆಚ್ಚಿನ ಮಟ್ಟದ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.

ಹಾಗೂ ಈ ಸಂಬಂಧವಾಗಿ ದೀರ್ಘ ಅಧ್ಯಯನ ನಡೆಸಲು ವಿಷಯ ತಜ್ಞರ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು, “ಮುಸ್ಲಿಂ ಸಮುದಾಯವು ಈ ಜನಗಣತಿ ಸರ್ವೆಯಲ್ಲಿ ಸಕ್ರಿಯವಾಗಿ ಹಾಗೂ ಸ್ಪಷ್ಟವಾಗಿ ಪಾಲ್ಗೊಳ್ಳಬೇಕು. ಜಾತಿ ನಮೂದಿಸುವ ಸಂದರ್ಭದಲ್ಲಿ ಯಾವುದೇ ಗೊಂದಲ ತಡೆಯುವುದು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ,” ಎಂದು ಒತ್ತಿಹೇಳಿದರು.

ಕಾರ್ಯಕ್ರಮವನ್ನು ಅಮ್ಜದ್ ಖಾನ್ ನಿರ್ವಹಿಸಿದ್ದು,

ಅಬ್ರಾರ್ ಅಹ್ಮದ್ ಸ್ವಾಗತಿಸಿ

ಅಪ್ಸರ್ ಕೊಡ್ಲಿಪೇಟೆ ವಂದನಾರ್ಪಣೆ ನೆರವೇರಿಸಿದರು.

ಈ ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನಾಯಕರಾದ ಅಬ್ದುಲ್ ಹನ್ನಾನ್, ಸಯದ್ ಶಫಿಯಲ್ಲಾ, ಮೌಲಾನಾ ಇಕ್ರಾಮ್, ಮೌಲಾನಾ ಶಕೀಲ್, ರಿಯಾಝ್ ಕಡಂಬೋ, ವಕೀಲ ಎಮ್.ಕೆ. ಮೇತ್ರಿ, ದಾದಾ ಪೀರ್, ದಾದಾ ಖಲಂದರ್, ಕಾಸಿಂ ಸಾಬ್ ಸೇರಿದಂತೆ ಹಲವಾರು ಗಣ್ಯರು ಮತ್ತು ವಿಶ್ವಾಸಾರ್ಹ ಪ್ರತಿನಿಧಿಗಳು ಭಾಗವಹಿಸಿದರು.

ಸಭೆಯು ಇಂತಹ ಬಗೆಯ ಇನ್ನಷ್ಟು ಸಂವಾದಗಳು ಮತ್ತು ಸಭೆಗಳನ್ನು ಆಯೋಜಿಸಬೇಕೆಂಬ ಅವಶ್ಯಕತೆಯನ್ನು ಒತ್ತಿಹೇಳಿತು, ಇದರಿಂದ ಸಂಪೂರ್ಣ ಚರ್ಚೆ ಮತ್ತು ಸಾರ್ವಜನಿಕ ಜಾಗೃತಿ ಪರಿಣಾಮಕಾರಿಯಾಗಿ ಮುಂದುವರಿಯಬಹುದು.

#SDPIKarnataka#RoundTableDialogue#NationalCasteCensus

See insights and ads

Boost post

All reactions:

6464

admin

Recent Posts

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ 1 ನವೆಂಬರ್ 2025 ಕನ್ನಡ ನನ್ನ ಕನಸು ಕನ್ನಡ ನನ್ನ ಮನಸ್ಸು ಕನ್ನಡಿಗನೆಂಬ ಹೆಮ್ಮೆ ಸೊಗಸು ನಾವೆಲ್ಲ…

3 hours ago

ಕರ್ನಾಟಕ ರಾಜ್ಯೋತ್ಸವ

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ ಒಲವಿನ ಕರ್ನಾಟಕ 01 ನವೆಂಬರ್ 2025 ಎಸ್‌ಡಿಪಿಐ ಕರ್ನಾಟಕ ರಾಜ್ಯಾದ್ಯಂತ ಕನ್ನಡ…

2 days ago

اقلیتوں کی فلاح و بہبود کے لیے

مختص رقم کہاں گئی؟ وائٹ پیپر جاری کرو ایس ڈی پی آئی 2025-26 کے بجٹ…

5 days ago

Aqalliyaton ki falah-o-behbood ke liye

Maqsoos Budget ki Raqham kahan gayi? White Paper jari karo - SDPI 2025-26 ke budget…

5 days ago

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಮೊತ್ತ ಏನಾಯ್ತು..?

ಶ್ವೇತ ಪತ್ರ ಹೊರಡಿಸಿ - ಎಸ್.ಡಿ.ಪಿ.ಐ 2025-26 ನೇ ಸಾಲಿನ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ ಮೊತ್ತವನ್ನು ಮೀಸಲಿಟ್ಟು ಅನೇಕ…

5 days ago