2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ “ವಿಸ್ತೃತ ಸೂತ್ರಧಾರೆ” ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್ ಎದುರು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಉಪಾಧ್ಯಕ್ಷ ಬಿಎಂ ಕಾಂಬ್ಳೆ ಅವರು ತೀವ್ರವಾಗಿ ಖಂಡಿಸಿದ್ದಾರೆ.
“ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಿಷ್ಕಳಂಕರೆಂದು ಪರಿಗಣಿಸಲಾಗುವವರೆಗೆ ಅಥವಾ ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಜೈಲಿನಲ್ಲಿ ಇರಿಸಬೇಕು” ಎಂಬ ತುಷಾರ್ ಮೆಹ್ತಾ ಅವರ ಮಾತುಗಳು ಭಾರತೀಯ ಸಂವಿಧಾನ, ನ್ಯಾಯದ ತತ್ವಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
2020ರ ಹಿಂಸಾಚಾರದಲ್ಲಿ 53 ಮಂದಿ ಪ್ರಾಣ ಕಳೆದುಕೊಂಡಿದ್ದು, ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಈ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸ್ ತೀವ್ರ ಪಕ್ಷಪಾತ ಹಾಗೂ ಅಸಮರ್ಥತೆಯನ್ನು ತೋರಿಸಿದೆ. ವಿಶೇಷವಾಗಿ ಉಗ್ರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನಡೆದ “ವಿಸ್ತೃತ ಸೂತ್ರಧಾರೆ” ಪ್ರಕರಣದಲ್ಲಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮುಂತಾದ ಹೋರಾಟಗಾರರು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ವಿಚಾರಣೆಯಿಲ್ಲದೇ ಬಂಧನದಲ್ಲಿರುವುದು, ನ್ಯಾಯದ ಮೂಲ ತತ್ವಗಳ ವಿರುದ್ಧವಾಗಿದೆ.
ಇದೇ ಪ್ರಕರಣದಲ್ಲಿ ನ್ಯಾಯಾಲಯಗಳು ತಮ್ಮ ಅಭಿಪ್ರಾಯದಲ್ಲಿ ದೆಹಲಿ ಪೊಲೀಸ್ ತನಿಖೆ “ಪಕ್ಷಪಾತಪೂರ್ಣ” ಮತ್ತು “ಅಜಾಗರೂಕ”ವಾಗಿದೆ ಎಂದು ಪ್ರಸ್ತಾಪಿಸಿ ಸಾಕ್ಷ್ಯಾಧಾರಗಳ ಕೊರತೆಯನ್ನೂ, ವೈಪರಿತ್ಯತೆಗಳನ್ನೂ ತೋರಿಸಿವೆ. 757 ಪ್ರಕರಣಗಳಲ್ಲಿ 183 ಮಂದಿ ಬಿಡುಗಡೆಗೊಂಡಿದ್ದು, ಕೇವಲ 47 ಪ್ರಕರಣಗಳಲ್ಲಿ ದೋಷಾರೋಪಣೆಯಾಗಿದೆ. ಇದರಿಂದ ತನಿಖೆಯ ದೌರ್ಬಲ್ಯ ಸ್ಪಷ್ಟವಾಗುತ್ತದೆ.
SG ತುಷಾರ್ ಮೆಹ್ತಾ ಅವರ ಮಾತುಗಳು ಉಗ್ರ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಸಿಎಎ ವಿರೋಧಿ ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದಮನಾತ್ಮಕ ಕ್ರಮ ಕೈಗೊಳ್ಳುವ ಪ್ರಯತ್ನವಾಗಿದೆ. ಹಿಂಸೆಗೆ ಪ್ರಚೋದನೆ ನೀಡಿದ ಇತರರಿಗೆ ಷಡ್ಯಂತ್ರದ ಭಾಗವೆಂದು ನೋಡದೆ ನಿರ್ಲಕ್ಷ್ಯ ಮಾಡುವ ಪಡ್ಧತಿಯು ನ್ಯಾಯಕ್ಕೆ ಧಕ್ಕೆ ತಂದಿದೆ.
SDPI ಈ ಕೆಳಗಿನ ಬೇಡಿಕೆಗಳನ್ನು ಮಂಡಿಸುತ್ತದೆ:
ನಾವು ಬಾಧಿತರೊಂದಿಗೆ ನಿಂತಿರುವೆವು. ನ್ಯಾಯಾಲಯಗಳು ಸಂವಿಧಾನಬದ್ಧ ಹಕ್ಕುಗಳನ್ನು, ನ್ಯಾಯಪ್ರಕ್ರಿಯೆಯ ಮೌಲ್ಯಗಳನ್ನು ಹಾಗೂ ಕಾನೂನು ವೈಭವವನ್ನು ಉಳಿಸಬೇಕು ಎಂಬುದು ನಮ್ಮ ಬಲವಾದ ಆಗ್ರಹವಾಗಿದೆ.
We express our heartfelt condolences to the people of Iran as they remember the passing…
Nasir Chandsha We are deeply saddened by the demise of Nasir, SDPI, Belgaum District Working…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI SDPIKarnataka #PUCExams
~ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPI
~ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPI