Categories: featureNewsPolitics

ಮಾನ್ಯ ಮುಖ್ಯಮಂತ್ರಿ Siddaramaiah ರವರೇ, ದಕ್ಷಿಣ ಕನ್ನಡದ ಪೊಲೀಸರು ಯಾರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ? ಕಾನೂನು ಬದ್ದವಾಗಿ ಎಲ್ಲಾ ದಾಖಲಾತಿಯನ್ನು ಹೊಂದಿರುವ ಇಸ್ಲಾಮಿಕ್ ಎಜುಕೇಶನ್‌ ಟ್ರಸ್ಟ್‌ ಅದೀನದಲ್ಲಿರುವ ಮಸ್ಜಿದ್ ಅಲ್ ಮರ್ಯಮ್ ಬಂಟ್ವಾಳ ತಾಲೂಕಿನ ಅಡ್ಡರು ಸಮೀಪದ ಪುಂಚಮೆ ಯಲ್ಲಿ ಅಜಾನ್ ಕರೆಗೆ ಪೊಲೀಸ್ ಇಲಾಖೆ ಯು 2 ವರ್ಷದ ಪರವಾನಿಗೆಯನ್ನು ನೀಡಿತ್ತು. ಈ ನ್ಯಾಯಬದ್ದ ಪರವಾನಿಗೆಯನ್ನು ರದ್ದು ಪಡಿಸಲು ಹಿಂದೂ ಜಾಗರಣೆ ವೇದಿಕೆ ಬಂಟ್ವಾಳ ಮತ್ತು ಯೋಗೀಶ್ ಪುಂಚಮೆ ಎಂಬಾತ ಪೊಳಲಿ ಪಂಚಾಯತ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅದಾರದಲ್ಲಿ ಹಿಂದುತ್ವ ಸಂಘಟನೆಯ ಒತ್ತಡಕ್ಕೆ ಮಣಿದ ಪೊಲೀಸರು ಧ್ವನಿವರ್ಧಕ ಪರವಾನಿಗೆ ರದ್ದತಿ ಮಾಡಿ, ಧ್ವನಿವರ್ಧಕವನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯಾ ಅಥವಾ ಆರ್ ಎಸ್ ಎಸ್ ಸರ್ಕಾರ ಇದೇಯಾ?

ಮಾನ್ಯ ಡಿ.ಜಿ.ಪಿ ರವರೇ, ತಕ್ಷಣ ಮಧ್ಯ ಪ್ರವೇಶಿಸಿ, ಧ್ವನಿವರ್ಧಕ ಪರವಾನಿಗೆಯನ್ನು ನೀಡಬೇಕಾಗಿ ಆಗ್ರಹಿಸುತ್ತೇನೆ.

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

admin

Recent Posts

ಸಂತಾಪ

ಸೈಯದ್ ಯಾಸೀನ್ ರಾಯಚೂರು ನಗರದ ಮಾಜಿ ಶಾಸಕ 12.07.2026 ರಾಯಚೂರು ನಗರದ ಮಾಜಿ ಶಾಸಕರಾದ ಸೈಯದ್ ಯಾಸಿನ್ ರವರು ನಿಧನ…

6 days ago