ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸಂಭ್ರಮಾಚರಣೆಗೆ ಸೀಮಿತವಾದುದಲ್ಲ. ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾಗಿ ದೊರೆಯಬೇಕಾದ ಹಕ್ಕು, ಗೌರವ, ನ್ಯಾಯ ಮತ್ತು ಘನತೆಯ ಬದುಕು. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ನೀಡಿರುವ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಹಕ್ಕು ಮತ್ತು ನ್ಯಾಯದ ಭರವಸೆ ನಿಜವಾಗಿ ಅನುಷ್ಠಾನಗೊಂಡಾಗ ಮಾತ್ರ ನಮ್ಮ ಸ್ವಾತಂತ್ರ್ಯ ಸಂಪೂರ್ಣವಾಗುತ್ತದೆ.
ಆದರೆ, ಇಂದು ದೇಶದಲ್ಲಿ ಸರ್ಕಾರವನ್ನು ಪ್ರಶ್ನಿಸುವವರು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರು ಮತ್ತು ಜನರ ಹಕ್ಕುಗಳ ಪರವಾಗಿ ಹೋರಾಡುವವರ ಮೇಲೆ ಯುಎಪಿಎ ಸೇರಿದಂತೆ ಕಠಿಣ ಕಾನೂನುಗಳನ್ನು ಬಳಸಿಕೊಂಡು ದೀರ್ಘಕಾಲ ವಿಚಾರಣಾಧೀನ ಕೈದಿಗಳಾಗಿ ಬಂಧಿಸುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪ ಸಾಬೀತಾಗುವ ಮೊದಲೇ ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತದ್ದು.
ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಣೆಯಾಗುತ್ತದೆ. ನಿರಪರಾಧಿತ್ವದ ಪೂರ್ವಾನುಮಾನ, ನ್ಯಾಯಯುತ ಮತ್ತು ಸಮಯೋಚಿತ ವಿಚಾರಣೆಯ ಹಕ್ಕು ಹಾಗೂ ಮಾನವೀಯ ಘನತೆಯಿಂದ ಬದುಕುವ ಹಕ್ಕುಗಳನ್ನು ಕಡೆಗಣಿಸಿದಾಗ ಸ್ವಾತಂತ್ರ್ಯದ ಅರ್ಥವೇ ಪ್ರಶ್ನಾರ್ಹವಾಗುತ್ತದೆ.
ನಿಜವಾದ ಸ್ವಾತಂತ್ರ್ಯವೆಂದರೆ ಶಕ್ತಿಶಾಲಿಗಳಿಗೆ ಮಾತ್ರವಲ್ಲ, ಸಾಮಾನ್ಯ ನಾಗರಿಕರಿಗೂ ದೊರೆಯುವ ಸ್ವಾತಂತ್ರ್ಯ; ಸರ್ಕಾರವನ್ನು ಬೆಂಬಲಿಸುವವರಿಗೆ ಮಾತ್ರವಲ್ಲ, ಸರ್ಕಾರವನ್ನು ಪ್ರಶ್ನಿಸುವವರಿಗೂ ದೊರೆಯುವ ಸ್ವಾತಂತ್ರ್ಯ; ಆರೋಪಿಗಳಿಗೂ ನ್ಯಾಯಯುತ ವಿಚಾರಣೆಯ ಅವಕಾಶ ದೊರೆಯುವ ಸ್ವಾತಂತ್ರ್ಯ.
ಈ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ, ಕರಾಳ ಕಾನೂನುಗಳ ದುರುಪಯೋಗಕ್ಕೆ ಕಡಿವಾಣ ಹಾಕಬೇಕು, ದೀರ್ಘಕಾಲದ ವಿಚಾರಣಾಧೀನ ಬಂಧನಗಳಿಗೆ ಅಂತ್ಯ ಹಾಡಬೇಕು ಮತ್ತು ಪ್ರತಿಯೊಬ್ಬರಿಗೂ ತ್ವರಿತ ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕನ್ನು ಖಾತ್ರಿಪಡಿಸಬೇಕು ಎಂದು ನಾವು ಸರ್ಕಾರಗಳನ್ನು ಆಗ್ರಹಿಸೋಣ.
ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳಿ೦ದ ಜೀವಂತವಾಗಿರುವುದಿಲ್ಲ; ಅದು ಪ್ರಶ್ನಿಸುವ ನಾಗರಿಕರ ಧೈರ್ಯದಿಂದ, ಭಿನ್ನಾಭಿಪ್ರಾಯವನ್ನು ಗೌರವಿಸುವ ಸಂಸ್ಕೃತಿಯಿಂದ ಮತ್ತು ನ್ಯಾಯ ಎಲ್ಲರಿಗೂ ಸಮಾನವಾಗಿ ದೊರೆಯುವುದರಿಂದ ಜೀವಂತವಾಗಿರುತ್ತದೆ.
ಇಂದು ನಾವು ಧ್ವಜವನ್ನು ಹಾರಿಸುವುದರ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ ಹಾಗೂ ಘನತೆಯನ್ನು ರಕ್ಷಿಸುವ ಸಂಕಲ್ಪವನ್ನು ಮಾಡಬೇಕಾಗಿದೆ.
ಈ ದೇಶದ ಸ್ವಾತ೦ಯಂತ್ರ್ಯವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯ ಮೇಲಿದೆ. ಭಯಮುಕ್ತ ಭಾರತ, ನ್ಯಾಯಯುತ ಭಾರತ, ಸಮಾನತೆಯ ಭಾರತ ಮತ್ತು ಸಂವಿಧಾನಿಕ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ದೊರೆಯುವ ಭಾರತವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆಯೋಣ.
ಎಲ್ಲಾ ದೇಶಬಾಂಧವರಿಗೆ
ಜೈ ಹಿಂದ್! ಜೈ ಸಂವಿಧಾನ್!
ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ ಮತ್ತು ಸಂಭ್ರಮವಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಗೌರವ, ನ್ಯಾಯ ಮತ್ತು ಘನತೆಯ ಬದುಕು.…
Independence is not merely about hoisting the national flag, singing the national anthem, or celebrating…
CELEBRATING 80th Independence Day 15th August 2026 ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ರಮಗಳು…
ಬೆಂಗಳೂರು, ಆ. 14 : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ರಾಜ್ಯ…
ಮಂಗಳೂರು ಗ್ರಾಮಾಂತರ ಮತ್ತು ಮಂಗಳೂರು ನಗರ ಜಿಲ್ಲೆಗಳ ಆರ್ಗನೈಝಿಂಗ್ ಸಮಿತಿಗೆ ಅಭಿನಂದನೆಗಳು. ಮಜೀದ್ ತುಂಬೆರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ…
ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ 03 & 04 ಆಗಸ್ಟ್ 2026 ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ -…