ವಿಧಾನಸಭಾ ಚುನಾವಣೆಯ ಫಲಿತಾಂಶವು ಜಾತ್ಯಾತೀತ ಪಕ್ಷಗಳ ದುರ್ಬಲತೆಯನ್ನು ಬಹಿರಂಗಗೊಳಿಸಿದೆ: ಎಂ.ಕೆ ಫೈಝಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಆಶ್ಚರ್ಯಕರ ಅಥವಾ ಅನಿರೀಕ್ಷಿತವೇನು ಅಲ್ಲ. ನಿಜವಾಗಿಯೂ ಇದು ಸ್ವಯಂ ಘೋಷಿತ ಜಾತ್ಯತೀತ ಪಕ್ಷಗಳ ಅಸಮರ್ಥತೆ ಮತ್ತು ದೌರ್ಬಲ್ಯವನ್ನು ಬಯಲುಗೊಳಿಸಿವೆ ಅಲ್ಲದೇ, ಬಿಜೆಪಿಯ ಯಶಸ್ಸನ್ನೇನಲ್ಲ. ಫ್ಯಾಸಿಸ್ಟರನ್ನು ಪ್ರತಿರೋಧಿಸುವುದರಲ್ಲಿ ಮತ್ತು ಸೋಲಿಸುವುದರಲ್ಲಿ ಬಹಿರಂಗಗೊಂಡ ವಿಫಲತೆಯನ್ನು ಇವಿಎಮ್ ನ್ನು ಬೊಟ್ಟು ಮಾಡಿ ಕೈ ತೊಳೆದುಕೊಳ್ಳಲಾಗದು. ಈವರೆಗೂ ಕಳೆದ ಏಳು ವರ್ಷಗಳಲ್ಲಿ ಈ ಪಕ್ಷಗಳು ಧನಾತ್ಮಕವಾದದ್ದನ್ನು ಏನು ಕಲಿತುಕೊಂಡಿಲ್ಲ. ಎಲ್ಲಾ ಬಿಜೆಪಿಯೇತರ ಪಕ್ಷಗಳು ಬಿಜೆಪಿಯೊಂದಿಗೆ ಸ್ನೇಹದಾಟ ಆಡಿಕೊಂಡಿದ್ದರು ಎಂಬುವುದು ಈ ಫಲಿತಾಂಶದಿಂದ ಗೋಚರಿಸುತ್ತದೆ. ಈ ಎಲ್ಲಾ ಪಕ್ಷಗಳು ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟರ ವಿರುದ್ಧ ಐಕ್ಯವಾಗಿ ನಿಲ್ಲುವುದರ ಜೊತೆಗೆ ಭಾರತದ ರಾಜಕೀಯ ರಂಗದಿಂದ ಫ್ಯಾಸಿಸ್ಟರನ್ನು ದೂರವಿಡುವುದರಲ್ಲಿ ಈ ರಾಜಕೀಯ ಪಕ್ಷಗಳು ಮತ್ತು ವಿಫಲಗೊಂಡಿತಿರುವುದೇ ಬಿಜೆಪಿಯ ಗೆಲುವಿಗೆ ಕಾರಣ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಗೆ ಇಂದಿಗೂ ರಾಷ್ಟ್ರವ್ಯಾಪಿ ಸಂಘಟಿತ ಸಂಪರ್ಕ ಮತ್ತು ಕಾರ್ಯಕರ್ತರಿದ್ದರೂ, ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ತಕ್ಕ ತಂತ್ರಗಳನ್ನು ರೂಪಿಸಿಕೊಂಡು ಚುನಾವಣೆಗಳನ್ನು ಎದುರಿಸುವ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ. ಈ ಚುನಾವಣೆಯಲ್ಲಿ, ದೈತ್ಯವಾಗಿ ಬೆಳೆಯುತ್ತಿರುವ ಫ್ಯಾಸಿಸಂನ್ನು ಎದುರಿಸುವ ಕಾರ್ಯಸೂಚಿ ಯಾವ ಪಕ್ಷದ್ದು ಆಗಿರಲಿಲ್ಲ. ಕೇವಲ ಕುತಂತ್ರಗಳ ಮೂಲಕವೇ ಅಧಿಕಾರಕ್ಕೇರುವ ಏಕೈಕ ಗುರಿಯ ಜೊತೆಗೆ ಅವಕಾಶ ಬಂದರೆ ಅಧಿಕಾರಕ್ಕಾಗಿ ಫ್ಯಾಸಿಸ್ಟರ ಜೊತೆಗೂಡಲೂ ಈ ಪಕ್ಷಗಳು ಸಿದ್ಧವಿದೆ. ದೇಶದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳಿಗೆ ಈ ಫಲಿತಾಂಶವು ಬಲವಾದ ಸಂದೇಶವನ್ನು ನೀಡಿದೆ. ‘ಜಾತ್ಯತೀತ’ ಪಕ್ಷಗಳು ತಮ್ಮನ್ನು ಇನ್ನೂ ವೋಟ್ ಬ್ಯಾಂಕ್ ಆಗಿ ಬಳಸುತ್ತಿದ್ದಾರೆ ಎಂಬ ಪ್ರಸಕ್ತತೆಯನ್ನು ಅರಿತುಕೊಳ್ಳುವ ಸಮಯ ಬಂದಿದೆ. ಬಿಜೆಪಿಯೇತರ ಪಕ್ಷಗಳು ಈಗಲೂ ಮೃದು ಹಿಂದುತ್ವ ಪ್ರದರ್ಶಿಸುತ್ತದೆ.ಈ ಪಕ್ಷಗಳ ಕೆಲವು ನಾಯಕರು ಬಲಪಂಥೀಯ ಫ್ಯಾಸಿಸ್ಟರ ಉಗ್ರ ಹಿಂದುತ್ವಕ್ಕೆ ಪರ್ಯಾಯವಾಗಿ ಮೃದು ಹಿಂದುತ್ವ ಎಂಬುವುದನ್ನು ಈ ಪಕ್ಷಗಳ ಕೆಲವು ನಾಯಕರು ಈಗಾಗಲೇ ಹೇಳಿಕೆ ನೀಡಿದ್ದರು. ಪರ್ಯಾಯವಲ್ಲ ಎಂಬ ಸತ್ಯವನ್ನು ಹೇಳಿದ್ದರು. ಫಲಿತಾಂಶಗಳು ಅಸ್ಮಿತೆಯ ರಾಜಕೀಯದ ಅಗತ್ಯತೆಯನ್ನು ಒತ್ತಿಹೇಳುತ್ತಿವೆ. ಚುನಾವಣಾ ಸಂದರ್ಭದಲ್ಲಿ ಸಮಯದಲ್ಲಿ ಮೃದು-ಹಿಂದುತ್ವದ ಸಂಕೋಲೆಗಳಲ್ಲಿ ಸಿಲುಕುವ ಅಲ್ಪಸಂಖ್ಯಾತರು ವಿಶೇಷವಾಗಿ ಮುಸಲ್ಮಾನರು ಈ ಪಕ್ಷಗಳಿಂದಾಗುವ ಅಪಾಯ ಮತ್ತು ಹಾನಿಯನ್ನು ಗುರುತಿಸಬೇಕು ಮತ್ತು ಅಸ್ಮಿತೆ ರಾಜಕಾರಣವನ್ನು ಉತ್ತೇಜಿಸಬೇಕು ಮತ್ತು ನವ ರಾಜಕೀಯ ಚಳುವಳಿಗಳನ್ನು ದೃಢತೆಯಿಂದ ಬೆಂಬಲಿಸಬೇಕು.ಫಲಿತಾಂಶಗಳ ಮತ್ತೊಂದು ಅತ್ಯಂತ ನಕಾರಾತ್ಮಕ ಸಂದೇಶವೆಂದರೆ ಭಾರತೀಯ ಮತದಾರರು ವಿನಾಶಕಾರಿಯಾಗಿ ಕೋಮುವಾದಕ್ಕೆ ಒಳಗಾಗಿದ್ದಾರೆ ಮತ್ತು ಬಹುಸಂಖ್ಯಾತ ಸಮುದಾಯವು ರಾಜ್ಯ ಅಥವಾ ರಾಷ್ಟ್ರದ ಅಭಿವೃದ್ಧಿಯ ವಿರುದ್ಧ ಮತಾಂಧತೆಗೆ ಆದ್ಯತೆ ನೀಡುತ್ತದೆ. ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶವು ಅತ್ಯಂತ ಹಾನಿಕಾರಕ, ಅತ್ಯಂತ ವಿನಾಶಕಾರಿ ಜನವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ಮತ್ತು ಕ್ರಮಗಳಿಗೆ ಸಾಕ್ಷಿಯಾಗಿದೆ.ಯುಪಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಬಲಪಂಥೀಯ ಐಟಿ ಪ್ಲಾಟ್‌ಫಾರ್ಮ್‌ಗಳನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಜನರಿಗೆ ಧನಾತ್ಮಕವಾದ ಏನೂ ವರದಿಯಾಗಿಲ್ಲ.ಈ ಅವಧಿಯಲ್ಲಿ ಪ್ರಮಾಣಾನುಗುಣವಾಗಿ ಬೆಳೆದದ್ದು ಮತಾಂಧತೆ, ಧರ್ಮಾಂಧತೆ, ದ್ವೇಷ, ಸ್ತ್ರೀದ್ವೇಷ, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಮತ್ತು ತೋರಿಪಡಿಕೆಯ ಕೆಲವು ಪ್ರದರ್ಶನಗಳು ಮಾತ್ರವಾಗಿದೆ.ಇನ್ನೂ, ಉತ್ತರ ಪ್ರದೇಶದ ಬಹುಪಾಲು ಜನರು ಅದೇ ಪಕ್ಷವನ್ನು ಅಧಿಕಾರಕ್ಕೆ ಆಯ್ಕೆ ಮಾಡಿರುವುದು ಇಡೀ ರಾಷ್ಟ್ರಕ್ಕೆ ಒಳ್ಳೆಯ ಶಕುನವಲ್ಲ.ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಅಧಿಕಾರಕ್ಕಿಂತ ಜನಪರವಾಗಿರಬೇಕು ಮತ್ತು ರಾಷ್ಟ್ರವನ್ನು ಫ್ಯಾಸಿಸಂನ ಗ್ರಹಣಾಂಗಗಳಿಂದ ರಕ್ಷಿಸಲು ಒಗ್ಗಟ್ಟಿನ ಮತ್ತು ಬಲವಾದ ಕಾರ್ಯತಂತ್ರವನ್ನು ಯೋಜಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ.ಬಿಜೆಪಿ ವಿರೋಧಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕಿಂತ ಜನ ಪರ ನಿಲುವು ತಾಳಬೇಕು ಮತ್ತು ಫ್ಯಾಸಿಸಂನ ಕಬಂದಬಾಹುಗಳಿಂದ ದೇಶವನ್ನು ರಕ್ಷಿಸಲು ಒಗ್ಗಟ್ಟಿನ ಮತ್ತು ದೃಢವಾದ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಎಸ್ ಡಿಪಿಐ ಒತ್ತಾಯಿಸುತ್ತದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿರುವ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪೋಷಿಸುವ ಭಾರತದ ನಿರ್ಮಾಣದಲ್ಲಿ ಮತ್ತು ತಾರತಮ್ಯವಿಲ್ಲದೆ ತನ್ನ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಹೊಂದಿರುವ ಭಾರತದ ನಿರ್ಮಾಣದಲ್ಲಿ ತೊಡಗಿರುವ ಜನಪರ ಪಕ್ಷಗಳು ಮತ್ತು ಚಳುವಳಿಗಳಲ್ಲಿ ಸೇರಬೇಕು ಮತ್ತು ಎಸ್ ಡಿಪಿಐ ದೇಶದ ಮತಾಂಧೇತರ ಬಹುಸಂಖ್ಯಾತರನ್ನು ಒತ್ತಾಯಿಸುತ್ತದೆ.

admin

Recent Posts

ಜಿಲ್ಲಾ ಪ್ರತಿನಿಧಿ ಸಭೆDISTRICT REPRESENTATIVE COUNCIL

Hearty Welcome MUJAHID PASHAState General Secretary RIYAZ KADAMBUState Secretary SALEEM AHMEDDistrict President DR. SHAIK TABREZDistrict…

58 minutes ago

WORLD ENVIRONMENT DAY

ವಿಶ್ವ ಪರಿಸರ ದಿನಾಚರಣೆ 05 JUNE ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ! ಇಂದು ನಾವು ನೆಡುವ ಒಂದು ಸಣ್ಣಗಿಡ, ನಾಳಿನ…

1 day ago

SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸದಸ್ಯರು, ಪುತ್ತೂರಿನ ಹಿರಿಯ ಉದ್ಯಮಿ, ಸಮಾಜಸೇವಕರು ಹಾಗೂ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಸಾಗರ್ ಇಬ್ರಾಹಿಂ ಹಾಜಿ ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ.ಅವರು ಸಮಾಜದ ಅಭಿವೃದ್ಧಿ, ಧಾರ್ಮಿಕ ಸೇವೆ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸಲ್ಲಿಸಿದ ಕೊಡುಗೆಗಳು ಸದಾ ಸ್ಮರಣೀಯವಾಗಿರಲಿವೆ. ಅವರ ಅಗಲಿಕೆಯಿಂದ ಕುಟುಂಬಕ್ಕೆ ಮಾತ್ರವಲ್ಲ, ಪುತ್ತೂರು ಭಾಗದ ಸಮುದಾಯಕ್ಕೂ ಮತ್ತು SDPI ಪಕ್ಷಕ್ಕೂ ತುಂಬಲಾರದ ನಷ್ಟ ಉಂಟಾಗಿದೆ.ಅಲ್ಲಾಹು ತಆಲಾ ಮರ್ಹೂಮ್ ಸಾಗರ್ ಇಬ್ರಾಹಿಂ ಹಾಜಿಯವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಿ, ಅವರಿಗೆ ಜನ್ನತುಲ್ ಫಿರ್ದೌಸ್ ಅನುಗ್ರಹಿಸಲಿ. ಅವರ ಕುಟುಂಬಸ್ಥರು, ಬಂಧುಬಳಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ಮತ್ತು ತಾಳ್ಮೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ SDPIKarnataka #Mangalore

1 day ago

ಜಿಲ್ಲಾ ಪ್ರತಿನಿಧಿ ಸಭೆ

DRC DISTRICT REPRESENTATIVE COUNCIL Heartly Welcome ABDUL HANNANState Vice President MAULANA AKRAMState Secretary ABDUL RAHEEM…

7 days ago

HAPPY Eid Al-Adha

Wishing you a beautiful and blessed Eid. Warm Wishes on Eid ul Adha May the…

1 week ago