Categories: featureNewsPolitics

ಎಸ್‌ಡಿಪಿಐ ಜನಪರ ಹೋರಾಟಗಳ ಮೂಲಕ ಜನರ ಸೇವೆ ಮಾಡುವ ಜೊತೆಗೆ ಘನತೆಯ ರಾಜಕೀಯಕ್ಕಾಗಿ ಸ್ವತಂತ್ರ ರಾಜ್ಯಾಧಿಕಾರದ ಗುರಿಯಡೆಗೆ ಮುನ್ನುಗ್ಗುತ್ತಿದೆ: ಅಪ್ಸರ್ ಕೊಡ್ಲಿಪೇಟೆ

ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ

ಹಾಸನ :(ಜೂನ್ 21) ಎಸ್ಡಿಪಿಐ ಪಕ್ಷದ 15ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಹಾಸನ ಜಿಲ್ಲಾ ಕಚೇರಿ ಮುಂಭಾಗ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ ಯವರು ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ಪಕ್ಷವು ನಡೆದು ಬಂದ ಹಾದಿ ಹಾಗೂ ಪಕ್ಷದ ಪ್ರಾಮುಖ್ಯತೆ ಬಗ್ಗೆ ವಿವರಿಸಿ ಮಾತನಾಡಿದ ಅವರು ಈ ದೇಶದಲ್ಲಿ ಅಲ್ಪಸಂಖ್ಯಾತರು,ದಲಿತರು,ಆದಿವಾಸಿಗಳು ನಿರಂತರ ತುಳಿತಕ್ಕೊಳಪಡುತ್ತಿದ್ದು ಈ ಪಕ್ಷ ಅಂತಹವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತಿದ್ದು ರಾಜಕೀಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ,ಯಶಸ್ವೀ 15 ನೇ ವರ್ಷಕ್ಕೆ ಕಾಲಿಡುತ್ತ ಜನಪರ ಹೋರಾಟಗಳ ಮೂಲಕ ಜನರ ಸೇವೆ ಮಾಡುವ ಜೊತೆಗೆ ಘನತೆಯ ರಾಜಕೀಯಕ್ಕಾಗಿ ಸ್ವತಂತ್ರ ರಾಜ್ಯಾಧಿಕಾರದ ಗುರಿಯಡೆಗೆ ಮುನ್ನುಗ್ಗುತ್ತಿದೆ. ಎಂದು ಅಭಿಪ್ರಾಯಪಟ್ಟು, ಶುಭಾಶಯ ಕೋರಿದರು .

ಈ ಸಂಧರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಆನೆಮಹಲ್, ಭಿಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಪ್ರದೀಪ್‌ ಹಾಗೂ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಅಜ್ಮಲ್, ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶರ್ಜೀಲ್ ಅಹಮದ್ ಹಾಗೂ ಪಕ್ಷದ ಕಾರ್ಯಕರ್ತರ ಉಪಸ್ಥಿತರಿದ್ದರು. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ಧ್ವಜಾರೋಹಣ ನೆರವೇರಿಸಿದರೆ, ಹಾಸನ ನಗರ ಚಿಕ್ಕನಾಳ್ ಸರ್ಕಲ್, ಮಿರ್ಜಾ ಮೂಹಲ್ಲ, ಹಾಸನ ಗ್ರಾಮಾಂತರ ಪ್ರದೇಶದ ಗುಲ್ಲೇನಹನಹಳ್ಳಿ ಮತ್ತು ಜಿಲ್ಲೆಯ ವಿವಿಧೆಡೆ ಪಕ್ಷದ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಿತು.
ಪಕ್ಷದ 15 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಪಕ್ಷದ ನಾಯಕರುಗಳು ಮತ್ತು ಕಾರಣಕರ್ತರು ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಪಕ್ಷದ ತತ್ವ ಸಿದ್ಧಾಂತಗಳ ಕುರಿತು ಜನ ಜಾಗೃತಿ ಮೂಡಿಸಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.

admin

Recent Posts

ಎಂಸಿಸಿ ಚುನಾವಣಾ ಸಂಬಂಧಿಸಿ SDPI ಮೈಸೂರು ಜಿಲ್ಲಾ ನಾಯಕರೊಂದಿಗೆ ಚುನಾವಣೆ ಪೂರ್ವ ತಯಾರಿ ಸಭೆ

ಮೈಸೂರು, ಜುಲೈ 12: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೈಸೂರು ಜಿಲ್ಲಾ ಕಾರ್ಯದರ್ಶಿ ಮಂಡಳಿ ಹಾಗೂ ವಿಧಾನಸಭಾ…

18 hours ago

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ SDPI ಕರ್ನಾಟಕ ಮುಖಂಡರ ಭೇಟಿ

ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ…

2 days ago

ನ್ಯಾಯವ್ಯವಸ್ಥೆಯ ಮೇಲೆ ಆಕ್ರಮಣ: ಎಸ್‌ಜಿ ತುಷಾರ್ ಮೆಹ್ತಾ ಅವರ ಹೇಳಿಕೆಗೆ ಬಿಎಂ ಕಾಂಬ್ಳೆ ಖಡಕ್ ಪ್ರತಿಕ್ರಿಯೆ

2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ "ವಿಸ್ತೃತ ಸೂತ್ರಧಾರೆ" ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್‌ ಎದುರು ಕೇಂದ್ರ ಸರಕಾರದ…

2 days ago

ಪತ್ರಿಕಾ ವರದಿ (Newspaper Coverage):

ಪತ್ರಿಕಾ ವರದಿ (Newspaper Coverage): ಗಂಗಾವತಿ, ಜುಲೈ 8:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜಿಲ್ಲಾಸಮಿತಿಯ ವಿಶೇಷ…

4 days ago