ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ

ದಲಿತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಬಿನ್ನವಲ್ಲ ಎಂದು ಉಪೇಂದ್ರ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ:
ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 14 ಆಗಸ್ಟ್ 2023: ದಲಿತರ ಮೇಲೆ ದೌರ್ಜನ್ಯ ಮತ್ತು ಅವಹೇಳನದ ಪ್ರಕರಣಗಳು ನಡೆದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್.ಸಿ / ಎಸ್.ಟಿ ಅಟ್ರಾಸಿಟಿ ಆಕ್ಟ್ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿದೆ. ಆದರೆ ಆಳುವ ಸರ್ಕಾರ ಇಚ್ಛಾಶಕ್ತಿ ತೋರದೆ ಹೋದರೆ ಅದ್ಯಾವುದೂ ಕೂಡ ದಲಿತರ ದೈಹಿಕ ರಕ್ಷಣೆ, ಆತ್ಮಗೌರವದ ರಕ್ಷಣೆಗೆ ಬರಲಾರದು. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಭಿನ್ನವಲ್ಲ ಎಂದು ಉಪೇಂದ್ರ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ನಟ ಉಪೇಂದ್ರ ಲೈವ್ ಕಾರ್ಯಕ್ರಮವೊಂದರಲ್ಲಿ ಇಡೀ ದಲಿತ ಸಮುದಾಯವನ್ನು ಅವಮಾನಿಸುವ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ರೂಢಿಗತ ಗಾದೆ ಎಂದು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲೂ ಮುಂದಾಗಿರುವುದು ಖಂಡನೀಯ. ಇದು ಜಾತಿ ಹೆಸರಿನಲ್ಲಿ ನಮ್ಮ ಸಾಮಾಜದಲ್ಲಿ ತುಂಬಿರುವ ಅಮಾನವೀಯತೆಯನ್ನು ಪ್ರದರ್ಶಿಸುತ್ತದೆ ಎಂದು ಮಜೀದ್ ಅವರು ಹೇಳಿದ್ದಾರೆ.

ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮ ಇದ್ದರು ನಟ ಉಪೇಂದ್ರ ರನ್ನು ಬಂಧಿಸಲು ಕರ್ನಾಟಕ ಸರ್ಕಾರ ಮತ್ತು ಪೋಲೀಸ್ ಇಲಾಖೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಬದಲಿಗೆ ಅವರು ಕೋರ್ಟ್ ಮೊರೆ ಹೋಗಿ ಎಫ್.ಐ.ಅರ್ ಗಳ ವಿರುದ್ಧ ತಡೆ ಪಡೆಯಲು ಸೂಕ್ತ ವಾತಾವರಣ ಸೃಷ್ಟಿಸಿಕೊಡಲಾಯಿತು ಎಂದು ಮಜೀದ್‌ ಆರೋಪಿದ್ದಾರೆ.

ಇನ್ನು ಸರ್ಕಾರ ಈ ಉದ್ದೇಶಪೂರ್ವಕ ನಿರ್ಲಕ್ಷ್ಯದ ವಿರುದ್ಧ ದಲಿತ ನಾಯಕರು ರಾಜ್ಯದ ಗೃಹಮಂತ್ರಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲು ಹೊರಟಾಗ ಅವರನ್ನು ತಡೆದು, ಅವಾಚ್ಯವಾಗಿ ನಿಂದಿಸಿ, ದೈಹಿಕವಾಗಿ ದೌರ್ಜನ್ಯ ನಡೆಸಲಾಗಿದೆ. ದಲಿತ ನಾಯಕರಾದ ಭಾಸ್ಕರ್ ಪ್ರಸಾದ್, ಹರಿರಾಮ್, ಹರೀಶ್ ಭೈರಪ್ಪ ಸೇರಿದಂತೆ ನ್ಯಾಯಕ್ಕಾಗಿ ಒತ್ತಾಯಿಸಲು ಹೊರಟಿದ್ದವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಯಿತು. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ಮಜೀದ್ ಅವರು ಸರ್ಕಾರದ ಈ ನಡವಳಿಕೆ ಖಂಡನೀಯ ಎಂದು ಹೇಳಿದ್ದಾರೆ.

admin

Recent Posts

ایس ڈی پی آئی ضلع صدور اور ضلع جنرل سکریٹریوں کی میٹنگ – بنگلور

2015-11-18 سوشیل ڈیموکریٹک پارٹی آف انڈیا (SDPI) کرناٹک کے ریاستی نائب صدر عبد الحنان کی…

2 days ago

SDPI ke District Presidents aur General Secretaries ki Meeting – BENGALURU

Bengaluru, 18-11-2025: Social Democratic Party of India (SDPI) Karnataka ke State Vice President Abdul Hannan…

2 days ago

ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ – ಬೆಂಗಳೂರು

ಬೆಂಗಳೂರು, 18-11-2025: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರ ಅಧ್ಯಕ್ಷತೆಯೊಂದಿಗೆ…

2 days ago

ಕೊಡ್ಲಿಪೇಟೆಯ ಮರೆಯಲಾಗದ ಮಾಣಿಕ್ಯ ಡಾ. ಇಕ್ಬಾಲ್ ಹುಸೇನ್ ಸರ್‌ ಕುಟುಂಬಕ್ಕೆ ಸಂತಾಪಗಳು

ಕೊಡ್ಲಿಪೇಟೆ ಹನಫಿ ಜಾಮೀಯಾ ಮಸ್ಜಿದ್‌ನ ಮಾಜಿ ಅಧ್ಯಕ್ಷರು, ಹಿರಿಯರು, ನಮ್ಮ ಸಂಬಂಧಿ (ನನ್ನ ತಾಯಿಯ ಸೋದರ ಸಂಬಂಧಿ) ಮತ್ತು ಕೊಡ್ಲಿಪೇಟೆಯ…

3 days ago

National Press Day

ಸಮಸ್ತ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರವು, ನಮ್ಮ…

5 days ago

ایس ڈی پی آئی ضلع صدور اور ضلع جنرل سکریٹریوں کی میٹنگ – ہیلی

ہلی15-11-2025 سوت صدر سوشیل ڈیموکریٹک پارٹی آف آف انڈیا (SDPI) کرناٹک کے ریاستی نائب عبدالحنان…

5 days ago