Categories: featureNewsPolitics

ರಾಜಕೀಯ ಹಕ್ಕುಗಳ ಹೋರಾಟದಲ್ಲಿ ಕುಟುಂಬಗಳ ಪಾತ್ರ ಅನಿವಾರ್ಯವಾಗಿದೆ’-ಅಪ್ಪರ್ ಕೊಡ್ಲಿಪೇಟೆ

ಬೆಂಗಳೂರು, 22 ಜೂನ್ 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ನಾಯಂಡನಹಳ್ಳಿ ವಾರ್ಡ್ ವ್ಯಾಪ್ತಿಯ ಕಾರ್ಯಕರ್ತರ ಕುಟುಂಬ ಸದಸ್ಯರೊಂದಿಗೆ “ಫ್ಯಾಮಿಲಿ ಗೆಟ್ ಟುಗೆದರ್” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪಕ್ಷದ ಕಳೆದ 16 ವರ್ಷಗಳ ಹೋರಾಟದ ಬದುಕು ಮತ್ತು ಪಕ್ಷದ ಕಾರ್ಯಕರ್ತರು ಎದುರಿಸಿದ ಸಂಕಷ್ಟಗಳ ಬಗ್ಗೆ ಮಾತನಾಡುತ್ತಾ “ರಾಜಕೀಯ ಸಿದ್ದಾಂತಗಳ ಕುರಿತು ತೀವ್ರ ನಿಷ್ಠೆ ಹೊಂದಿರುವ SDPI ಪಕ್ಷದ ಚಳವಳಿಯ ಬಲವು ಕೇವಲ ವ್ಯಕ್ತಿಗಳ ತ್ಯಾಗದಲ್ಲಿ ಅಲ್ಲ, ಆ ವ್ಯಕ್ತಿಗಳ ಹಿಂದೆ ನಿಂತಿರುವ ಕುಟುಂಬಗಳ ಧೈರ್ಯ, ಸಹನೆ ಮತ್ತು ನೈತಿಕ ಬೆಂಬಲದಲ್ಲಿಯೂ ಇದೆ.

ಹೋರಾಟವು ಸಂಘಟಿತವಾಗಬೇಕಾದರೆ ಅದು ಮನೆಯ ತಳಮಟ್ಟದಲ್ಲೇ ಪ್ರಾರಂಭವಾಗಬೇಕು. ಕುಟುಂಬದ ಸದಸ್ಯರು, ಮುಖ್ಯವಾಗಿ ಮಹಿಳೆಯರು ಮತ್ತು ಯುವಕರ ಪಾಲು ಈ ಹೋರಾಟದ ಪ್ರಮುಖ ಪ್ರೇರಣೆಯಾಗಿದೆ “

ಎಂದು ಒತ್ತಿ ಹೇಳಿದರು:

“ಹಿರಿಯರ ಅನುಭವಗಳು ಮತ್ತು ಮಕ್ಕಳ ಭರವಸೆ, ಕುಟುಂಬದಲ್ಲಿ ಬೆಳೆದ ಸಂಸ್ಕಾರಗಳು ಪಕ್ಷದ ಭವಿಷ್ಯವನ್ನು ರೂಪಿಸುತ್ತವೆ. ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ ಹೋರಾಟ ಒಂದಿಷ್ಟು ಜನರ ಹೊಣೆಗಾರಿಕೆಯಷ್ಟೇ ಅಲ್ಲ, ಅದು ಕುಟುಂಬದ ಪ್ರತಿಯೊಬ್ಬ ಸದಸ್ಯನ ನಿಷ್ಠೆ ಮತ್ತು ಜವಾಬ್ದಾರಿ ಆಗಬೇಕು.” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಕಾರ್ಯಕರ್ತರು ತಮ್ಮ ಜೀವನದಲ್ಲಿ ಎದುರಿಸಿದ ರಾಜಕೀಯ ಅಥವಾ ಸಾಮಾಜಿಕ ಅನ್ಯಾಯಗಳನ್ನು ಹಂಚಿಕೊಂಡು ಭಾವನಾತ್ಮಕ ಹೊಣೆಗಾರಿಕೆಯನ್ನು ವ್ಯಕ್ತಪಡಿಸಿದರು. ಯುವಕರು, ವಿಶೇಷವಾಗಿ ಹೈ ಸ್ಕೂಲ್ ಹಾಗೂ ಕಾಲೇಜು ಮಟ್ಟದವರು, ತಮ್ಮ ಮುಂದಿರುವ ಸಮಾಜ ಪರಿವರ್ತನೆ ಸಂಬಂಧಿತ ಕನಸುಗಳು ಮತ್ತು ಪಕ್ಷದ ಮೂಲಕ ತಾವು ಪಡೆದ ಪ್ರೇರಣೆಯ ಬಗ್ಗೆ ಮಾತನಾಡಿದರು.

”ಈ ರೀತಿಯ ಕುಟುಂಬ ಸಮ್ಮಿಲನಗಳು ಕೇವಲ ಸಾಮಾಜಿಕ ನೆಲೆಗಟ್ಟಿನಲ್ಲಿಯೇ ಅಲ್ಲ, ಇವು ಪಕ್ಷದ ನೈತಿಕ ಶಕ್ತಿಯನ್ನು ಬಲಪಡಿಸುವ, ನಂಬಿಕೆಗಳ ಚಿಂತನೆಗೆ ಪ್ರಚೋದನೆ ನೀಡುವ, ಮತ್ತು ಮುಂದಿನ ಪೀಳಿಗೆಗೆ ರಾಜಕೀಯ ಜವಾಬ್ದಾರಿಯ ಸಂದೇಶ ನೀಡುವ ಪ್ರಮುಖ ವೇದಿಕೆಯಾಗಲಿ ಎಂದು ಅಪ್ಸರ್ ಕೊಡ್ಲಿಪೇಟೆ ಕರೆ ನೀಡಿದರು.”

ಸಭೆಯಲ್ಲಿ ಹಾಜರಿದ್ದವರು:

SDPI ನಾಯಂಡನಹಳ್ಳಿ ವಾರ್ಡ್ ಅಧ್ಯಕ್ಷ ಮೋಹಮ್ಮದ್ ನಯಾಜ್, ಕಾರ್ಯದರ್ಶಿ ಇನಾಯತ್ ಪಾಷ, ಪಕ್ಷದ ಜಿಲ್ಲಾ ನಾಯಕರು, ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ಪ್ರಮುಖ ಸದಸ್ಯರು

17thFormationDay #FreeMKFaizy #SDPIFormationDay #21stJune #SDPIKarnataka

admin

Recent Posts

ಎಂಸಿಸಿ ಚುನಾವಣಾ ಸಂಬಂಧಿಸಿ SDPI ಮೈಸೂರು ಜಿಲ್ಲಾ ನಾಯಕರೊಂದಿಗೆ ಚುನಾವಣೆ ಪೂರ್ವ ತಯಾರಿ ಸಭೆ

ಮೈಸೂರು, ಜುಲೈ 12: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೈಸೂರು ಜಿಲ್ಲಾ ಕಾರ್ಯದರ್ಶಿ ಮಂಡಳಿ ಹಾಗೂ ವಿಧಾನಸಭಾ…

27 minutes ago

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ SDPI ಕರ್ನಾಟಕ ಮುಖಂಡರ ಭೇಟಿ

ಬಾಗಲಕೋಟೆ ಜಿಲ್ಲೆ ಮುಧೋಳ ನಗರಕ್ಕೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಮೈಸೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿಗಳಾದ…

1 day ago

ನ್ಯಾಯವ್ಯವಸ್ಥೆಯ ಮೇಲೆ ಆಕ್ರಮಣ: ಎಸ್‌ಜಿ ತುಷಾರ್ ಮೆಹ್ತಾ ಅವರ ಹೇಳಿಕೆಗೆ ಬಿಎಂ ಕಾಂಬ್ಳೆ ಖಡಕ್ ಪ್ರತಿಕ್ರಿಯೆ

2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ "ವಿಸ್ತೃತ ಸೂತ್ರಧಾರೆ" ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್‌ ಎದುರು ಕೇಂದ್ರ ಸರಕಾರದ…

1 day ago

ಪತ್ರಿಕಾ ವರದಿ (Newspaper Coverage):

ಪತ್ರಿಕಾ ವರದಿ (Newspaper Coverage): ಗಂಗಾವತಿ, ಜುಲೈ 8:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜಿಲ್ಲಾಸಮಿತಿಯ ವಿಶೇಷ…

3 days ago