ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು, ವೈಯಕ್ತಿಕವಾಗಿ ನನ್ನ ಹಿತೈಷಿಗಳು ಮಾರ್ಗದರ್ಶಕರು ಆಗಿದ್ದಂತಹ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮೈಸೂರು ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷರಾದ ಶ್ರೀ ಆಲೂರು ಮಲ್ಲಣ್ಣನವರು ಇಂದು ಇಹಲೋಕ ತ್ಯಜಿಸಿದ್ದಾರೆ. ಈ ದುಃಖದಾಯಕ ಸಂದರ್ಭದಲ್ಲಿ ಅತೀವ ಸಂತಾಪ ವ್ಯಕ್ತಪಡಿಸುತ್ತಾ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಸೃಷ್ಟಿಕರ್ತನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
~ಅಮ್ಜದ್ ಖಾನ್, ರಾಜ್ಯ ಕೋಶಾಧಿಕಾರಿ, ಎಸ್ ಡಿ ಪಿ ಐ ಕರ್ನಾಟಕ.