ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ ಸಭೆಯು,ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನನ್ ರವರ ಅಧ್ಯಕ್ಷೆತೆಯಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ರವರ ಉಪಸ್ಥಿತಿಯಲ್ಲಿ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಜರಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದಾಗ, ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನನ್ ರವರು, ದೇಶದಲ್ಲಿ ಹಲವಾರು ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಆದರೆ ಹಸಿವು ಮುಕ್ತ ಸ್ವಾತಂತ್ರ, ಭಯ ಮುಕ್ತ ಸ್ವಾತಂತ್ರ ದೇಯದೊಂದಿಗೆ ಕಾರ್ಯನಿರ್ವಹಿಸುವ ನಾವು ಜನಪರ ಹೋರಾಟ, ಪ್ರತಿಭಟನೆ, ಆಂದೋಲನ ಜೊತೆ ಜೊತೆಗೆ ಚುನಾವಣೆಯು ನಮ್ಮ ಮುಖ್ಯ ಧ್ಯೇಯವಾಗಿರಬೇಕು.
ಹೋರಾಟ, ಪ್ರತಿಭಟನೆ, ಮತ್ತು ಜನಾಂದೋಲನ ಮೂಲಕ ವಂಚಿತರ ಹಕ್ಕುಗಳನ್ನು ತಕ್ಕಮಟ್ಟಿಗೆ ಕೊಡಿಸಬಹುದಾಗಿದೆ ಆದರೆ ರಾಜಕೀಯ ಪ್ರತಿನಿಧಿತ್ವದಿಂದ ಅದನ್ನು ಸುಲಭಗೊಳಿಸಬಹುದಾಗಿದೆ. ಆದ್ದರಿಂದ
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ನಗರಡಾಳಿತಗಳ ಚುನಾವಣೆವೆ ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ಹಾಗೂ ಬೂತ್ ಮಟ್ಟದಲ್ಲಿ ಜಿಲ್ಲಾ ನಾಯಕರಿಂದ ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ಪಡೆದು ಕಾರ್ಯ ಸೂಚಿಯನ್ನು ನೀಡಿದರು. ಹಾಗೂ ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ದೊಂಬರಾಟದಲ್ಲಿ ತೊಡಗಿವೆ, ಈಗಾಗಲೇ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಜಾತಿಗಳಿಗೆ ಅವರ ಹಕ್ಕುಗಳನ್ನು ತಲುಪಿಸುವಂತಹ ಕೆಲಸ ಆಡಳಿತ ವರ್ಗ ಮಾಡಬೇಕಾಗಿತ್ತು.
ಈ ಹಿಂದೆ 2015 ರಲ್ಲಿ ಕಾಂತರಾಜ್ ಆಯೋಗದ ಮೂಲಕ 170 ಕೋಟಿ ಖರ್ಚು ಮಾಡಿ ಜಾತಿ ಜನಗಣತಿಯನ್ನು ಮಾಡಲು ಅಂದಿನ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಮನಸು ಮಾಡಿತ್ತು. ಈ ವರದಿಯನ್ನು ಸ್ವೀಕರಿಸಿ, ಜಾರಿಗೊಳಿಸಬೇಕಾಗಿದ್ದ ಎಲ್ಲಾ ರಾಜಕೀಯ ಪಕ್ಷಗಳು ಶೋಷಿತ ವರ್ಗಗಳಿಗೆ ಅವರ ಹಕ್ಕುಗಳನ್ನು ನೀಡದೆ ವಂಚಿಸಿವೆ. ಈ ವರದಿಯನ್ನು ತಯಾರಿಸಲು ಪ್ರಮುಖ ಪಾತ್ರವಹಿಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ
ಈಗಲಾದರೂ ವರದಿ ಸ್ವೀಕರಿಸಿ, ವಂಚಿತರಿಗೆ ಅವರ ಹಕ್ಕು ನೀಡಬೇಕಾಗಿದ್ದ ಇವರು ಪ್ರಬಲ ಜಾತಿಗಳಿಗೆ ಮಣಿದು ಮಗದೊಮ್ಮೆ ಜಾತಿ ಗಣತಿಗೆ ಆದೇಶ ಮಾಡಿರುವುದು ಹಾಸ್ಯಸ್ಪದವಾಗಿದೆ ಎಂದರು.
ಜಾತಿಗಣತಿ ಮಾಡುವ ಸಂದರ್ಭದಲ್ಲಿ ವಂಚಿತ ಸಮುದಾಯಗಳಿಗೆ ಹಕ್ಕು ಕೊಡಿಸುವ ನಿಟ್ಟಿನಲ್ಲಿ, ಜನಸಾಮಾನ್ಯರನ್ನು ಎಲ್ಲರನ್ನೂ ತೊಡಗಿಸಲು, ಹಾಗೂ ಸರಿಯಾದ ಮಾಹಿತಿಯನ್ನು ಬರೆಸಲು ಜನರಿಗೆ ಜನರಿಗೆ ಸಹಕರಿಸುವಂತೆ, ಸೂಚನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಯಿದ್ ಪಾಷಾ, ಜಾತ್ಯತೀತ ನೆಲೆಯಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು, ಕೋಮುವಾದಿ ಬಿಜೆಪಿಯನ್ನು ದಿಟ್ಟವಾಗಿ ಎದುರಿಸಲು, ಹಾಗು ಸಂಘಟಿತರಾಗಿ ಹೋರಾಡದೆ ಜನರನ್ನು ವಂಚಿಸಿವೆ.
ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸೆದುಕೊಳ್ಳಲು, ವಕ್ಫ್ ತಿದ್ದುಪಡಿ ಕಾನೂನನ್ನು ಕೋಮುವಾದಿ ಬಿಜೆಪಿ ಸರ್ಕಾರ ಜಾರಿಗೊಳಿಸಿದಾಗ, ನಿರ್ಲಕ್ಷ್ಯ ವಹಿಸಿದ್ದೆ, ಜಾತ್ಯತೀತ ಮುಖವಾಡ ಪಕ್ಷಗಳಿಗೆ ಕನ್ನಡಿ ಹಿಡಿದು ತೋರಿಸಿದಂತೆ ಇದೆ.
ಮುಸ್ಲಿಮರ ಅಸ್ಮಿತೆಯಾದ ವಕ್ಫ್ ಆಸ್ತಿಗಳನ್ನು ಉಳಿಸಲು, ಈಗಾಗಲೇ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ವತಿಯಿಂದ ದೇಶದಿಂದ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಹೋರಾಟವನ್ನು ಜನಾಂದೋಲನ ವಾಗಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.
ایس ڈی پی آئی بامبے کرناٹک کے ضلع صدور اور جنرل سکریٹریز کی خصوصی میٹنگ
مقام: ہبلی – تاریخ: 29 جون
سوشیل ڈیموکریٹک پارٹی آف انڈیا (SDPI) بامبے کرناٹک ریجن کے ضلع صدور اور جنرل سیکریٹریز کی ایک اہم خصوصی میٹنگ ریاستی نائب صدر جناب عبدالحنان کی صدارت میں، اور ریاستی جنرل سیکریٹری جناب مجاہد پاشا کی موجودگی میں، تجارتی راجدھانی ہبلی میں منعقد ہوئی۔
میٹنگ کا آغاز کرتے ہوئے جناب عبدالحنان صاحب نے کہا کہ ملک میں کئی سیاسی پارٹیاں اپنے اپنے انداز میں کام کر رہی ہیں، لیکن ہم جو بھوک سے آزاد، خوف سے آزاد سماج کی تعمیر کے لیے جدوجہد کر رہے ہیں، ہمارا اصل مقصد عوامی تحریکوں، احتجاجات کے ساتھ ساتھ انتخابات میں بھی مضبوط شرکت ہونی چاہیے۔
انہوں نے کہا کہ جدوجہد، احتجاج اور عوامی تحریک کے ذریعہ محروم طبقات کو ان کے حقوق دلانا ممکن ہے، لیکن سیاسی نمائندگی کے ذریعہ یہ عمل زیادہ آسان اور پائیدار بنایا جا سکتا ہے۔ اس لیے آنے والے ضلع پنچایت، تعلقہ پنچایت اور شہری بلدیاتی انتخابات ہماری اولین ترجیح ہونی چاہیے۔
اسی تناظر میں انتخابات کی تیاری، اور بوتھ سطح پر پارٹی تنظیم کے بارے میں ضلعی رہنماؤں سے معلومات حاصل کرکے ہدایات جاری کی گئیں۔
NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು
ಗದಗ, 26 ಜೂನ್ 2025: ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…
SDPIKarnataka #Bangalore #rameshsiddegowda #Sirangapattana
~Adv. ಶರ್ಫುದ್ದೀನ್ ಅಹ್ಮದ್,ರಾಷ್ಟ್ರೀಯ ಉಪಾಧ್ಯಕ್ಷರು#SDPIKarnataka #Israel #ಪಾಲೇಸ್ತಿನೇ #Palestine