ಕರ್ನಾಟಕದಲ್ಲಿ ಸರಿ ಸುಮಾರು 15 ಲಕ್ಷ ಜನಸಂಖ್ಯೆ ಹೊಂದಿರುವ ಬ್ಯಾರಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ, ಬ್ಯಾರಿ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.
2025ರ ಆಗಸ್ಟ್ 10 ರಂದು ಮೈಸೂರಿನ ಕೆಆರ್ ಕನ್ವೆನ್ಷನ್ ಹಾಲ್ನಲ್ಲಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಬ್ಯಾರಿ ವೇಲ್ಫೇರ್ ಅಸೋಸಿಯೇಷನ್ ಮೈಸೂರು ಅವರ ಸಹಯೋಗದಲ್ಲಿ ನಡೆದ 2024ರ ಸಾಲಿನ ಬ್ಯಾರಿ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಬ್ಯಾರಿ ಸಂಗಮದಲ್ಲಿ ‘ಬೆಲ್ಕಿರಿ ದೈ’ ಮಾಸಿಕ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಯು.ಹೆಚ್. ಉಮರ್ ವಹಿಸಿದರು.
ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2024ರ ಗೌರವ ಪ್ರಶಸ್ತಿಯನ್ನು ಬೆಂಗಳೂರಿನ ಮಕ್ಸೂದ್ ಅಹ್ಮದ್, ಕಟಿಪಳ್ಳದ ಹೈದರ್ ಅಲಿ ಮತ್ತು ಮೂಡಬಿದ್ರಿಯ ಪಿ.ಎಂ. ಹಸನಬ್ಬ ಅವರಿಗೆ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಅವರು ಬ್ಯಾರಿ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಕರೆ ನೀಡಿದರು.
ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊತ್ತೊಯ್ಯುವ ಹಲವಾರು ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು
Announcement AYESHA SHABBIR 25/02/26, WEDNESDAY @1:30 Pm ZOHAR Namaz @MASJID-E-UQBA Saraipalya, THANISANDRA, BANGALORE Scan for…
ಭಾರತದ ಸ್ವಾಭಿಮಾನದ ಸಂಕೇತವಾಗಿ, ಬ್ರಿಟಿಷರ ದಮನಕ್ಕೆ ತಲೆಬಾಗದೆ ಹೋರಾಡಿದ ಧೈರ್ಯಶಾಲಿ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರ…
~ರಮಜಾನ ಕಡಿವಾಲ,ರಾಜ್ಯ ಕಾರ್ಯದರ್ಶಿ SDPIKarnataka #Bagalkot