ವಿದೇಶಿ ತಬ್ಲೀಗ್ ಜಮಾತ್ ಬಗ್ಗೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ: ಎಸ್‌ ಡಿಪಿಐ

ನವದೆಹಲಿ(24.08.2020): ವಿದೇಶಿ ತಬ್ಲೀಗಿಗಳ ಕುರಿತು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ ಡಿಪಿಐ)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಸ್ವಾಗತಿಸಿದ್ದಾರೆ

ಭಾರತೀಯ ದಂಡ ಸಂಹಿತೆ-ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆಯ ವಿವಿಧ ಕಲಂಗಳಡಿ ಈ ವಿದೇಶಿ ತಬ್ಲೀಗಿಗಳ ಮೇಲೆ ಪ್ರಕರಣ ದಾಖಲಾಗಿತ್ತು. ಈ ಎಲ್ಲಾ 29 ಎಫ್‌ ಐಆರ್‌ ಗಳನ್ನು ರದ್ದುಪಡಿಸಿರುವ ಬಾಂಬೆ ಹೈಕೋರ್ಟ್, ಈ ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿದೇಶಿಯರಿಗೆ ಆಶ್ರಯ ನೀಡಿದ್ದಕ್ಕಾಗಿ ಆರು ಭಾರತೀಯ ಪ್ರಜೆಗಳ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಐವರಿ ಕೋಸ್ಟ್, ತಾಂಜೇನಿಯಾ, ಜಿಬೌಟಿ, ಬೆನಿನ್ ಮತ್ತು ಇಂಡೋನೇಷ್ಯಾ, ಘಾನಾದಂತಹ ದೇಶಗಳ ವಿದೇಶಿ ಪ್ರಜೆಗಳು ಸಲ್ಲಿಸಿದ ಮೂರು ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ಆಯೋಜಿಸಿದ್ದ ತಬ್ಲೀಗ್ ಜಮಾಅತ್ ಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರ ನೀಡಿರುವ ಮಾನ್ಯ ವಿಸಿಟಿಂಗ್ ವೀಸಾದಲ್ಲಿ ಅರ್ಜಿದಾರರು ಭಾರತಕ್ಕೆ ಆಗಮಿಸಿದ್ದರು. ಅವರು ಅಹ್ಮದ್‌ ನಗರ ಜಿಲ್ಲೆಗೆ ಆಗಮಿಸಿದ ಬಗ್ಗೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದರು. ವೀಸಾ ಷರತ್ತುಗಳಲ್ಲಿ ಇಲ್ಲದಿದ್ದರೂ ಅವರು ಸ್ಥಳೀಯ ಅಧಿಕಾರಿಗಳಿಗೆ ತಮ್ಮ ಆಗಮನದ ಬಗ್ಗೆ ಮಾಹಿತಿ ಒದಗಿಸಿದ್ದರು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಕುರಿತು ವೀಸಾ ಷರತ್ತುಗಳಲ್ಲಿ ಯಾವುದೇ ನಿರ್ಬಂಧವಿರಲಿಲ್ಲ. ಕೋವಿಡ್ -19 ಸೋಂಕಿನ ಕಾರಣದಿಂದಾಗಿ ಮಾರ್ಚ್ 23 ರಂದು ರಾಷ್ಟ್ರವ್ಯಾಪಿ ಲಾಕ್‌ ಡೌನ್ ಘೋಷಣೆಯಾದ ನಂತರ ಅವರು ದೆಹಲಿಯಲ್ಲಿ ಸಿಲುಕಿಕೊಂಡರು. ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯ, ವಸತಿಗೃಹಗಳು ಮತ್ತು ಹೋಟೆಲ್‌ ಗಳನ್ನು ಮುಚ್ಚಲಾಗಿತ್ತು. ಆದ್ದರಿಂದ ಅವರಿಗೆ ಉಳಿದುಕೊಳ್ಳಲು ಮಸೀದಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಅವರು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಅಥವಾ ಜಿಲ್ಲಾಧಿಕಾರಿಯ ಆದೇಶವನ್ನೂ ಉಲ್ಲಂಘಿಸಿರಲಿಲ್ಲ ಎಂದು ಅವರು ತಿಳಿಸಿದರು.

ಆರ್‌.ಎಸ್‌.ಎಸ್‌ ನಿಯಂತ್ರಿತ ಇಸ್ಲಾಮೋಫೋಬಿಕ್ ಧರ್ಮಾಂಧ ಕೇಂದ್ರದ ಬಿಜೆಪಿ ಸರ್ಕಾರ, ಈ ಪ್ರವಾಸಿಗರ ಅಸಹಾಯಕತೆಯನ್ನು ಮುಸ್ಲಿಮರನ್ನು ಕೆಣಕಲು ಬಳಸಿಕೊಂಡಿತು. ಈ ವಿದೇಶಿಯರು ದೇಶದಲ್ಲಿ ಕೊರೊನಾ ಸೋಂಕು ಹರಡಲು ಕಾರಣವೆಂದು ಸುಳ್ಳು ಆರೋಪ ಮಾಡಿದರು. ಅರ್ಜಿದಾರರು ದೇಶಕ್ಕೆ ಆಗಮಿಸುವಾಗಲೇ ಅವರನ್ನು ವಿಮಾನ ನಿಲ್ದಾಣಗಳಲ್ಲಿ ಕೊರೊನಾ ತಪಾಸಣೆ ನಡೆಸಲಾಗಿತ್ತು. ನೆಗೆಟಿವ್ ಇದ್ದವರನ್ನು ಮಾತ್ರ ವಿಮಾನ ನಿಲ್ದಾಣದಿಂದ ಹೊರಬರಲು ಅವಕಾಶ ಕಲ್ಪಿಸಲಾಗಿತ್ತು. ಮೋದಿ ಪರ, ಆರ್‌ಎಸ್‌ಎಸ್ ಪರ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುವ ಮತ್ತು ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಿ ಅಪಪ್ರಚಾರ ಮಾಡುವ ತಮ್ಮ ಕೆಟ್ಟ ಕಾರ್ಯಸೂಚಿಯನ್ನು ಈಡೇರಿಸಿದರು. ನ್ಯಾಯಮೂರ್ತಿ ಟಿ.ವಿ.ನಲವಾಡೆ ಮತ್ತು ನ್ಯಾಯಮೂರ್ತಿ ಎಂ.ಜಿ.ಸೆವಿಲ್ಕರ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ನ್ಯಾಯಪೀಠದ ವಿಭಾಗೀಯ ಪೀಠವು 29 ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವಾಗ, ಅವರ ವಿರುದ್ಧದ ಎಲ್ಲಾ ಎಫ್‌ ಐಆರ್‌ ಗಳನ್ನು ರದ್ದುಪಡಿಸಿ, ಮಾಧ್ಯಮದ ಸುಳ್ಳು ಪ್ರಚಾರವನ್ನು ತೀವ್ರವಾಗಿ ಟೀಕಿಸಿದೆ. ಮಾತ್ರವಲ್ಲ ಈ ಅಸಹಾಯಕ ಅರ್ಜಿದಾರರನ್ನು ಬಲಿಪಶು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ. ವಿದೇಶಿಯರ ವಿರುದ್ಧ ಕೈಗೊಂಡ ಈ ಕ್ರಮದ ಬಗ್ಗೆ ಸಂಬಂಧಪಟ್ಟವರು ಪಶ್ಚಾತ್ತಾಪ ಪಡುವ ಮತ್ತು ಈ ಹಾನಿಯನ್ನು ಸರಿಪಡಿಸಲು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಅವರು ತಿಳಿಸಿದರು.

ದೇಶದ ನಾಗರಿಕರ ವಿರುದ್ಧ ಕೋಮು ತಾರತಮ್ಯ ಮತ್ತು ದ್ವೇಷವನ್ನು ಹರಡುವುದನ್ನು ಕೊನೆಗೊಳಿಸಬೇಕು. ಭಾರತದ ಸಂವಿಧಾನದಲ್ಲಿ ತಿಳಿಸಿರುವಂತೆ ಅವರೆಲ್ಲರನ್ನೂ ಸಮಾನವಾಗಿ ಪರಿಗಣಿಸುವಂತೆ ಸರ್ಕಾರ ಮತ್ತು ಅದರ ಕೈಗೊಂಬೆ ಮಾಧ್ಯಮಗಳಿಗೆ ಶಾಫಿ ಕಿವಿ ಮಾತು ಹೇಳಿದ್ದಾರೆ.

admin

Recent Posts

ಸಂತಾಪಗಳು

ಸೈಯದ್ ಸೈಫುಲ್ಲಾ 4. 2026 ದಾವಣಗೆರೆಯ ಸ‌ರ್ ಸಯ್ಯದ್ ಅಹ್ಮದ್ ಖಾನ್ ಎಂದು ಕರೆಯಲ್ಪಡುವ ಗಣ್ಯ ಶಿಕ್ಷಣತಜ್ಞರು,ಅಂಜುಮನ್ ಇಸ್ಲಾಮಿಯಾ ದಾವಣಗೆರೆ…

9 hours ago

Condolence

SAYED SAIFULLA 4. 2026 I am deeply saddened by the passing of Syed Saifulla Sab,…

9 hours ago

ಸಂವಿಧಾನ ಶಿಲ್ಪಿ, ಭಾರತ ರತ್ನ,

ಡಾ|| ಬಾಬಾ ಸಾಹೇಬ್ ಅಂಬೇಡ್ಕ‌ರ್ 14 April, 2026 ಜನ್ಮ ದಿನಾಚರಣೆ ಪ್ರಯುಕ್ತ ಸಾಮಾಜಿಕ ನ್ಯಾಯ ದಿನಾಚರಣೆ SOCIAL JUSTICE…

5 days ago

داؤانگیری ضمنی انتخاب 2026 ایس ڈی پی آئی کا واضح مؤقف

داؤ انگیری کے ضمنی انتخاب کے تناظر میں کانگریس پارٹی کی جانب سے اپنے ہی…

6 days ago