ವಿಕಲಚೇತನರ ಹೋರಾಟಕ್ಕೆ SDPI ಬೆಂಬಲ :
ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭೇಟಿ
ಸಾಂಸ್ಕೃತಿ ನಗರ ಮೈಸೂರಿನಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಅಕ್ರಮವಾಗಿ ನೀರಿನ ಟ್ಯಾಂಕನ್ನು ನಿರ್ಮಿಸುತ್ತಿರುವ ಸರ್ಕಾರದ ಅವೈಜ್ಞಾನಿಕ ನಡೆಯನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡುತ್ತಿದ್ದ ವಿಕಲಚೇತನರಿಗೆ ನೈತಿಕ ಬೆಂಬಲ ನೀಡಿ ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಅಬ್ದುಲ್ ಮಜೀದ್ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತ ವಿಕಲಚೇತನರು ತಮ್ಮ ಬದುಕನ್ನು ಸಾರಗವಾಗಿ ನಡೆಸುವುದು ಕಷ್ಟ. ಅದುದರಿಂದಲ್ಲೇ ವಿಕಲಚೇತನರ ಹಕ್ಕುಗಳಿಗಾಗಿ ಮತ್ತು ಅವರ ರಕ್ಷಣೆಗಾಗಿ ಕಾಯಿದೆ, ನೀತಿ ನಿಯಮಗಳಿವೆ. ಇದೆಲ್ಲವನ್ನು ಗಾಳಿಗೆ ತೋರಿ ಅಕ್ರಮವಾಗಿ ನೀರಿನ ಟ್ಯಾಂಕ್ ಕಾಮಗಾರಿ ಮಾಡುತ್ತಿರುವುದು ಘೋರ ದೌರ್ಜನ್ಯವಾಗಿದೆ. ವಿಕಲಚೇತನರಿಗೆ ತೊಂದರೆ ನೀಡಿ ಈ ಕಾಮಗಾಲ ಮುಂದುವರಿಸುವುದು ಸರಿಯಾದ ಕ್ರಮವಲ್ಲ. ಇದನ್ನು ತಕ್ಷಣ ನಿಲ್ಲಿಸ ಬೇಕು ಎಂದು ಮಜೀದ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಮ್ಮದ್ ಖಾನ್, ಮೈಸೂರು ಜಿಲ್ಲಾಧ್ಯಕ್ಷರಾದ ರಫತ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಫಿ ಉಲ್ಲಾ, ವಾರ್ಡ್ ಸಂಖ್ಯೆ 35 ರ ವಾರ್ಡ್ ಅಧ್ಯಕ್ಷರಾದ ನಸ್ರುಲ್ಲಾ, ಹಾಗೂ ಸಾಮಾಜಿಕ ಹೋರಾಟಗಾರರಾದ ನಂಜರಾಜ ಅರಸು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ ಆನೇಕಲ್:ಸೆ. 17:ಸಾಮಾಜಿಕ ನ್ಯಾಯ, ಸಮಾನತೆ,…
13 ಸೆಪ್ಟೆಂಬರ್ 2026ಪಾಲನ ಭವನ , ಬೆಂಗಳೂರು WIM
5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh
Prakash Raj, Abdul Majeed SDPI and several others detained by Bengaluru Police During Election Commission…
SDPIKarnataka #NepalFloods
ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…