Categories: featureNewsPolitics

ಸ್ವಯಂಘೋಷಿತ ಗೋರಕ್ಷಕರಿಂದ ಕೊಲೆಗೀಡಾದ ಮಂಡ್ಯದ ಇದ್ರೀಸ್ ಪಾಷಾ ಅವರ ಮನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಭೇಟಿ ಕೊಟ್ಟು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ದನದ ವ್ಯಾಪಾರಿಯಾಗಿದ್ದ ಇದ್ರೀಸ್ ಪಾಷಾ ದನ ಸಾಗಾಟ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ ಅವರ ವಾಹನವನ್ನು ತಡೆದಿದ್ದಾನೆ. ಆ ಸಂದರ್ಭದಲ್ಲಿ ಇದ್ರೀಸ್ ಪಾಷಾ ಅವರು ಜಾನುವಾರು ಮಾರುಕಟ್ಟೆಯ ಕಾಗದ ಪತ್ರಗಳನ್ನು ಒದಗಿಸಿದ್ದಾರೆ. ಆದರೆ ಪುನೀತ್ ಮತ್ತು ಅವನ ಗುಂಪು 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಇದ್ರೀಸ್ ಪಾಷಾ ಆ ಹಣವನ್ನು ಪಾವತಿಸಲು ನಿರಾಕರಿಸಿದಾಗ ಪುನೀತ್ ಕೆರೆಹಚ್ಚಿ ಅವನ ಸಹಚರರೊಂದಿಗೆ ಸೇರಿ ಇದ್ರೀಸ್ ಪಾಷಾ ಅವರನ್ನು ಥಳಿಸಿದ್ದಾನೆ.

ಇದ್ರೀಸ್ ಪಾಷಾ ಅವರ ಮೃತದೇಹ ರಾಮನಗರ ಜಿಲ್ಲೆಯ ಸಾತನೂರು ಗ್ರಾಮದ ರಸ್ತೆಯೊಂದರ ಪಕ್ಕ ಪತ್ತೆಯಾಗಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ

admin

Recent Posts

HAPPY Eid Al-Adha

Wishing you a beautiful and blessed Eid. Warm Wishes on Eid ul Adha May the…

2 days ago