ಕೇಡರ್ ಬೇಸ್ಡ್, ಸೈದ್ಧಾಂತಿಕ ಪಕ್ಷಗಳು ಚುನಾವಣೆಯಲ್ಲಿ ಯಾವತ್ತೂ ಸುಲಭ ಹಾಗೂ ಕ್ಷಿಪ್ರ ಜಯವನ್ನು ಗಳಿಸಲು ಸಾಧ್ಯವಿಲ್ಲ. ನಮಗೆ ಚುನಾವಣೆ ಎಂದರೆ ಕೇವಲ ಪ್ರಚಾರ, ಮತದಾನ, ಫಲಿತಾಂಶ ಅಷ್ಟಕ್ಕೆ ಮಾತ್ರ ಸೀಮಿತವಲ್ಲ. ಅದು ಐದು ವರ್ಷಗಳಿಗೊಮ್ಮೆ ಬರುವ ಪ್ರಕ್ರಿಯೆ ಮಾತ್ರ, SDPI ಪಕ್ಷದ ಚುನಾವಣಾ ರಾಜಕೀಯಕ್ಕಿಂತಲೂ ಮಿಗಿಲಾಗಿ ಹೋರಾಟ ರಾಜಕೀಯವನ್ನು ನೆಚ್ಚಿಕೊಂಡಿರುವ ಪಕ್ಷ. ಇಂತಹ ವಿಷಮ ಸನ್ನಿವೇಶದಲ್ಲಿ ಸ್ಪರ್ಧಿಸಿದರೆ, ತನ್ನ ವಿರುದ್ಧ ಟೀಕೆ-ಟಿಪ್ಪಣಿಗಳು ಬರಬಹುದು ಎಂದು ಚೆನ್ನಾಗಿ ಅರಿತು, ಕೇವಲ 16 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ SDPI ದೂರ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳದ ಜನರು ಮಾತ್ರವೇ ನಮ್ಮ ಸ್ಪರ್ಧೆಯನ್ನು ಗೇಲಿ ಮಾಡಬಲ್ಲರು.

~ಅಪ್ಸರ್ ಕೂಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

admin

Recent Posts

HAPPY Eid Al-Adha

Wishing you a beautiful and blessed Eid. Warm Wishes on Eid ul Adha May the…

3 days ago