Categories: featureNewsPolitics

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರೇ,ಈ ಬಾರಿ ನಿಮಗೆ 1 ಕೋಟಿ 67 ಲಕ್ಷ ಮತ ಕೊಟ್ಟು 135 ಸೀಟು ಕೊಟ್ಟವರು, ಈ ನಾಡಿನ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಪ್ರಜಾತಂತ್ರ ವಾದಿಗಳು ಮತ್ತು ಜಾತ್ಯತೀತ ಸಿದ್ಧಾoತ ನಂಬುವವರು. RSS & BJP ಯ ಕೋಮು ವಿದ್ವೇಷ ರಾಜಕಾರಣದಿಂದ ಬೇಷತ್ತವರು.

ನಿಮಗೆ RSS, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಪರವಾಗಿರುವವರು ಮತ ನೀಡಿಲ್ಲ, ಇವರೇ ಆಗಿರುತ್ತಾರೆ, ಈಗ ನಿಮ್ಮ ಎಲ್ಲಾ ಯೋಜನೆ ಮತ್ತು ಹೇಳಿಕೆಗಳ ವಿರುದ್ಧ ಮಾತನಾಡುವವರು, ಇವರಿಗೆ ಕೆಲವು ಮಾರಿಕೊಂಡ ಮಾಧ್ಯಮಗಳು ಬೆಂಬಲ ನೀಡುತ್ತಿವೆ. ನಿಮ್ಮ ಯೋಜನೆ, ನಿಲುವು, ನಿಮಗೆ ಮತ ನೀಡಿದ ಜನರ ಪರ ಇರಲಿ.

RSS/BJP IT CELL ಗಳ ಪ್ರೊಪಗಾಂಡಗಳು
ನಿಮ್ಮ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಾರದು ಮತ್ತು ನಿಮ್ಮ ನಿರ್ಧಾರ, ನಿಲುವು ಗಟ್ಟಿಯಾಗಿರಲಿ, ಯಾವ ಕಾರಣಕ್ಕೂ ನಿಮ್ಮ ನಿಲುವು ಮತ್ತು ಹೇಳಿಕೆಯಿಂದ ನೀವು ಯೂ ಟರ್ನ್ ಹೊಡೆಯಬಾರದು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ

admin

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

18 hours ago