feature

ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಸ್ವಾಗತಾರ್ಹ

ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಮುಂಗೇರಿ ಲಾಲ್ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ಜನರಿಗೆ, ಅದರಲ್ಲಿ ಅತಿ ಹಿಂದುಳಿದಿದ್ದ ಮುಸ್ಲಿಮರನ್ನೂ ಸೇರಿಸಿ ಶೇ. 26% ಮೀಸಲಾತಿ ಒದಗಿಸಿ ಕೊಟ್ಟವರು ಅಂದಿನ ಬಿಹಾರದ ಮುಖ್ಯ ಮಂತ್ರಿಯಾಗಿದ್ದ ಕಾರ್ಪುರಿ ಠಾಕೂರ್. ಆ ಮೂಲಕ ಕರ್ನಾಟಕದಲ್ಲಿ 2B ಮೀಸಲಾತಿಗೆ ಮತ್ತು ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಗಳಿಗೆ ಪ್ರೇರಣೆಯಾದರು. ಮುಂದೆ ಮಂಡಲ್ ಕಮಿಷನ್ ನೇಮಕಕ್ಕೂ ಇದು ಪ್ರೇರಣೆಯಾಯಿತು. ಅದೇ ಕಾರಣಕ್ಕೆ ಅಂದು RSS ನಾಯಕರು ಅವರನ್ನು ಬಹಿರಂಗವಾಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರ ತಾಯಿಯ ಬಗ್ಗೆ ಕೆಟ್ಟ, ಕೆಟ್ಟ ಘೊಷಣೆಗಳನ್ನು ಬೀದಿ, ಬೀದಿಗಳಲ್ಲಿ ಕೂಗಿದ್ದರು. ಇಂದು ಮಹಾ ಚುನಾವಣೆಯಲ್ಲಿ ಬಿಹಾರದ ಜನರ ಮತ ಸೆಳೆಯುವ ಉದ್ದೇಶದಿಂದ ಮೋದಿ ಸರ್ಕಾರ ಅವರಿಗೆ ಭಾರತ ರತ್ನ ಘೋಷಿಸಿದೆ. ಬಿಜೆಪಿಯ ತಂತ್ರ ಏನೇ ಇರಲಿ. ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಭಾರತದ ಸಾಮಾಜಿಕ ನ್ಯಾಯಕ್ಕಾಗಿ ದುಡಿ ಒಬ್ಬ ಧೀಮಂತ ವ್ಯಕ್ತಿಗೆ ಸಂದ ಗೌರವ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸ್ವಾಗತಿಸುತ್ತದೆ. 

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago