ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಮುಂಗೇರಿ ಲಾಲ್ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ಜನರಿಗೆ, ಅದರಲ್ಲಿ ಅತಿ ಹಿಂದುಳಿದಿದ್ದ ಮುಸ್ಲಿಮರನ್ನೂ ಸೇರಿಸಿ ಶೇ. 26% ಮೀಸಲಾತಿ ಒದಗಿಸಿ ಕೊಟ್ಟವರು ಅಂದಿನ ಬಿಹಾರದ ಮುಖ್ಯ ಮಂತ್ರಿಯಾಗಿದ್ದ ಕಾರ್ಪುರಿ ಠಾಕೂರ್. ಆ ಮೂಲಕ ಕರ್ನಾಟಕದಲ್ಲಿ 2B ಮೀಸಲಾತಿಗೆ ಮತ್ತು ದೇಶದ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರಗಳಿಗೆ ಪ್ರೇರಣೆಯಾದರು. ಮುಂದೆ ಮಂಡಲ್ ಕಮಿಷನ್ ನೇಮಕಕ್ಕೂ ಇದು ಪ್ರೇರಣೆಯಾಯಿತು. ಅದೇ ಕಾರಣಕ್ಕೆ ಅಂದು RSS ನಾಯಕರು ಅವರನ್ನು ಬಹಿರಂಗವಾಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರ ತಾಯಿಯ ಬಗ್ಗೆ ಕೆಟ್ಟ, ಕೆಟ್ಟ ಘೊಷಣೆಗಳನ್ನು ಬೀದಿ, ಬೀದಿಗಳಲ್ಲಿ ಕೂಗಿದ್ದರು. ಇಂದು ಮಹಾ ಚುನಾವಣೆಯಲ್ಲಿ ಬಿಹಾರದ ಜನರ ಮತ ಸೆಳೆಯುವ ಉದ್ದೇಶದಿಂದ ಮೋದಿ ಸರ್ಕಾರ ಅವರಿಗೆ ಭಾರತ ರತ್ನ ಘೋಷಿಸಿದೆ. ಬಿಜೆಪಿಯ ತಂತ್ರ ಏನೇ ಇರಲಿ. ಕಾರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ದೊರೆತಿರುವುದು ಭಾರತದ ಸಾಮಾಜಿಕ ನ್ಯಾಯಕ್ಕಾಗಿ ದುಡಿ ಒಬ್ಬ ಧೀಮಂತ ವ್ಯಕ್ತಿಗೆ ಸಂದ ಗೌರವ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸ್ವಾಗತಿಸುತ್ತದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು, ಹಣದ ಬಲ ಮತ್ತು ರಾಜ್ಯ ಯಂತ್ರಾಂಗದ ಬಹಿರಂಗ ದುರುಪಯೋಗದ ಮೂಲಕ ಪಡೆದ…
ಹುತಾತ್ಮ ದಿನ 04 ಮೇ "ನೂರು ವರ್ಷ ನರಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಉತ್ತಮ." ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು…
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ…
-7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ! ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು…
01 MAY 2026 "Respect Labour. Restore Dignity. Ensure Justice. This Labour Day, let every worker…