ಅಹಿಂದ ಯುವಜನ ಬಳಗ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಏಕೆ ಅಪ್ಸರ್ ಕೊಡ್ಲಿಪೇಟೆ ಅವರನ್ನು ಬೆಂಬಲಿಸುತ್ತಿದ್ದೇವೆ

ನೈಜ ಜನಸೇವಕ – ನಮ್ಮ ಶಾಸಕ

  • ಜನಪರ ನಾಯಕ – ಶೋಷಿತ, ಬಡವರು ಮತ್ತು ಹಿಂದುಳಿದ ಸಮುದಾಯಗಳ ನಿಜವಾದ ಧ್ವನಿ. ಎಲ್ಲಾ ವರ್ಗಗಳ ಸಮಸ್ಯೆಗಳಿಗೆ ಸ್ವರ ತುಂಬುವ ನಾಯಕ.

ನ್ಯಾಯ ಮತ್ತು ಸಮಾನತೆಯ ಹೋರಾಟಗಾರ – ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ನಿರಂತರ ಹೋರಾಟ. ಧೈರ್ಯಶಾಲಿ ನಿಲುವುಗಳಿಂದ ಜನರ ಹಕ್ಕುಗಳನ್ನು ರಕ್ಷಿಸುತ್ತಿದ್ದಾರೆ.

  • ಬಾಬಾಬುಡನ್‌ ದರ್ಗಾ ಹೋರಾಟದಲ್ಲಿ ಮುಂಚೂಣಿ ಪಾತ್ರ – ಧಾರ್ಮಿಕ ಸೌಹಾರ್ದತೆ ಮತ್ತು ಸಾಮರಸ್ಯದ ಪ್ರತೀಕವಾದ ದರ್ಗಾವನ್ನು ರಕ್ಷಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ವಕ್ಫ್ ಹಕ್ಕುಗಳ ರಕ್ಷಣೆಗಾಗಿ ಮುಂಚೂಣಿ ಹೋರಾಟ – ವಕ್ಫ್ ಬಚಾವ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿ, ಅಲ್ಪಸಂಖ್ಯಾತರ ಹಕ್ಕುಗಳನ್ನು ದೃಢವಾಗಿ ಕಾಯುತ್ತಿದ್ದಾರೆ.

ಜನವಿರೋಧಿ ಕಾಯ್ದೆಗಳ ವಿರುದ್ಧ ಧ್ವನಿ – NRC, CAA, SIR ಮುಂತಾದ ಕಾಯ್ದೆಗಳ ವಿರುದ್ಧ ತೀವ್ರ ಹೋರಾಟ ನಡೆಸಿ, ಜನರ ಹಿತವನ್ನು ರಕ್ಷಿಸಿದ್ದಾರೆ.

  • ಜನವಿರೋಧಿ ಕಾಯ್ದೆಗಳ ವಿರುದ್ಧ ಧ್ವನಿ – NRC, CAA, SIR ಮುಂತಾದ ಕಾಯ್ದೆಗಳ ವಿರುದ್ಧ ತೀವ್ರ ಹೋರಾಟ ನಡೆಸಿ, ಜನರ ಹಿತವನ್ನು ರಕ್ಷಿಸಿದ್ದಾರೆ.

ಸಾಮಾಜಿಕ ನ್ಯಾಯದ ಸಕ್ರಿಯ ಹೋರಾಟಗಾರ

  • 2(B) ಮೀಸಲಾತಿ ಮರುಸ್ಥಾಪನೆಗಾಗಿ ನಿರಂತರ ಒತ್ತಾಯ

ಹಿಜಾಬ್ ನಿಷೇಧ ಹಿಂಪಡೆಯುವಂತೆ ಆಗ್ರಹ

ಕಾಂತರಾಜ್ ಆಯೋಗ ವರದಿ ಜಾರಿಗೆ ತೀವ್ರ ಒತ್ತಾಯ

  • ರೈತರು, ದಲಿತರು ಮತ್ತು ಬಡವರ ಪರ ನಿಲುವು – ರೈತ ವಿರೋಧಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿ, ರೈತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

ಬಡವರ ಮನೆಗಳ ರಕ್ಷಣೆಗಾಗಿ ಹೋರಾಟ

ದಾವಣಗೆರೆ ಹೆಗ್ಡೆ ನಗರದಲ್ಲಿ ಬುಲ್ಲೋಜರ್ ಕಾರ್ಯಾಚರಣೆಗೆ ತುತ್ತಾದ ನಿವಾಸಿಗಳ ಪರ ಧ್ವನಿ

ಬೆಂಗಳೂರಿನ ಕೋಗಿಲು ಮತ್ತು ಥಣಿಸಂದ್ರ ಬಡಾವಣೆಗಳಲ್ಲಿ ಬಿಡಿಎ ಬುಲ್ಲೋಜರ್‌ ದಾಳಿಗೆ ಈಡಾದ ನಿರಾಶ್ರಿತರಿಗೆ ಪುನರ್ವಸತಿ ಹೋರಾಟದಲ್ಲಿ ಮುಂಚೂಣಿ

  • ರಾಜ್ಯ ಮಟ್ಟದ ಚಳುವಳಿಗಳಲ್ಲಿ ಸಕ್ರಿಯ ಪಾತ್ರ – ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ನಡೆದ ಎಲ್ಲಾ ಮಹತ್ವದ ಹೋರಾಟಗಳಲ್ಲಿ ಭಾಗವಹಿಸಿ, ಜನರೊಂದಿಗೆ ನಿಂತಿದ್ದಾರೆ.
  • ಧೈರ್ಯಶಾಲಿ ಮತ್ತು ಬದ್ಧತೆಯುಳ್ಳ ನಾಯಕ – ಹೋರಾಟದ ಬೆಂಕಿಯಲ್ಲಿ ರೂಪುಗೊಂಡ ವ್ಯಕ್ತಿತ್ವ, ಸ್ವಾಭಿಮಾನದ ರಾಜಕೀಯಕ್ಕೆ ಪ್ರತೀಕ.

ಶೋಷಿತ ಸಮುದಾಯಗಳ ಶಕ್ತಿಗಾಗಿ

ನ್ಯಾಯ, ಸಮಾನತೆ ಮತ್ತು ಸ್ವಾಭಿಮಾನದ ರಾಜಕೀಯಕ್ಕಾಗಿ

ಅಪ್ಪ‌ರ್ ಕೊಡ್ಲಿಪೇಟೆಯವರನ್ನು ಬೆಂಬಲಿಸಿ

ಅಹಿಂದ ಯುವಜನ ಬಳಗ, ಕರ್ನಾಟಕ

SDPIKarnataka #Davangere #ByElection

admin

Recent Posts

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

1 week ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

2 weeks ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 weeks ago