ಜುಲೈ 4: ಮಾಜಿ ಸಚಿವೆ, ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯ್ಕ್ ಅವರಿಗೆ ಕೊಲೆ ಬೆದರಿಕೆ ಬಂದಿರುವುದು ಆತಂಕಕಾರಿ ವಿಷಯ.
ಕರ್ನಾಟಕದಲ್ಲಿ ಹಿರಿಯ ಸಾಹಿತಿ ಎಂ.ಎಂ. ಕಲಬುರ್ಗಿ, ಖ್ಯಾತ ಹೋರಾಟಗಾರ್ತಿ, ಲೇಖಕಿ ಗೌರಿ ಲಂಕೇಶ್ ಹತ್ಯೆಗಳು ನಡೆಯುವ ಮುಂಚೆ ಹಲವಾರು ಸಂದರ್ಭದಲ್ಲಿ ಅವರಿಗೂ ಜೀವ ಬೆದರಿಕೆ ಕರೆಗಳು, ಬೆದರಿಕೆ ಪತ್ರಗಳು ಬಂದಿದ್ದವು. ಆದರೆ ಅಂದಿನ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಕೊಡಲಿಲ್ಲ ಮತ್ತು ಆ ಬಗ್ಗೆ ನಿರ್ಲಕ್ಷ್ಯ ವಹಿಸಿತು. ಈ ಕಾರಣದಿಂದಾಗಿ ನಾಡಿನ ಘನ ವ್ಯಕ್ತಿತ್ವಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಇಂದು ಅದೇ ಸ್ವರೂಪದ ಜೀವ ಬೆದರಿಕೆ ಕರೆಗಳು, ಪತ್ರಗಳು ಬಿ.ಟಿ ಲಲಿತಾ ನಾಯ್ಕ್ ಅವರಿಗೆ ಬಂದಿವೆ. ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಕೂಡಲೇ ಎಚ್ಚೆತ್ತು ಕೊಂಡು ಇದರ ಹಿಂದಿನ ಕೈಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಮತ್ತು ಬಿ.ಟಿ ಲಲಿತಾ ನಾಯ್ಕ್ ಅವರಿಗೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿ ಅವರ ಸುರಕ್ಷತೆಯನ್ನು ಖಾತರಿ ಪಡಿಸಬೇಕೆಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಆಗ್ರಹಿಸಿದ್ದಾರೆ.
ಲೀಡರ್ಸ್ ಕಾನ್ಕ್ಲೇವ್ 28 APRIL 2026 ಇಂಡಿಯಾನ ಕನ್ವೆನ್ಷನ್ ಸೆಂಟರ್ ಮಂಗಳೂರು ಸಂಜೆ 4.00 ಗಂಟೆಗೆ SDPIKatnataka #LeadersConclave #mangalore
ಈ ಘೋರ ದುರಂತಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ SDPI ಒತ್ತಾಯ 2021 ರ ಮೇ 2 ರಂದು ಚಾಮರಾಜನಗರ…
27.04.2026 SDPI NATIONAL PRESIDENT M.K FAIZY SDPIKarnataka #Mangalore #MKFaizy
ಪ್ರಿಯ ವಿದ್ಯಾರ್ಥಿಗಳೇ,ಇಂದಿನ SSLC ಫಲಿತಾಂಶವು ನಿಮ್ಮ ಜೀವನದ ಒಂದು ಹಂತ ಮಾತ್ರ - ಅಂತಿಮ ಗುರಿ ಅಲ್ಲ. ನಿಮ್ಮ ಪರಿಶ್ರಮ…
ಹಾರ್ದಿಕ ಶುಭಾಶಯಗಳು 4. 2026 "ಕಾಯಕವೇ ಕೈಲಾಸ" ಎಂದು ಹೇಳಿದ ಬಸವಣ್ಣನವರ ತತ್ವಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪ. ಜಾತಿ,…