ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಕಟಿಸಲಾದ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜೊತೆಗೆ ಉರ್ದು ಭಾಷೆಯಲ್ಲಿಯೂ ಪ್ರಕಟಿಸಲಾಗಿದೆ.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರ ಮಾಹಿತಿ ಎಲ್ಲ ವರ್ಗದ ಜನರಿಗೆ ತಲುಪುವ ಉದ್ದೇಶದಿಂದ ಬಹುಭಾಷಾ ಪ್ರಕಟಣೆ ನೀಡಿರುವುದು ಸಹಜ ಮತ್ತು ಸ್ವಾಗತಾರ್ಹ ಕ್ರಮವಾಗಬೇಕಾಗಿತ್ತು.
ಆದರೆ, ಕೆಲ ಮಾಧ್ಯಮಗಳು ಮತ್ತು ಕೆಲವು ವಕ್ತಾರರು ಉರ್ದು ಭಾಷೆಯ ಬಳಕೆಯನ್ನೇ ಪ್ರಶ್ನಿಸಿ ವಿವಾದ ಸೃಷ್ಟಿಸಲು ಮುಂದಾಗಿರುವುದು ವಿಷಾದಕರ ಸಂಗತಿ.
ಭಾಷೆ ವಿರುದ್ಧ ದ್ವೇಷ ಬೇಡ
ಸಂವಿಧಾನಾತ್ಮಕ ಗೌರವ ಬೇಕು
~ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ
