17 Jan By admin feature, News, Politicsಪುಲಿಕೇಶಿ ನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಜಂಟಿ ಚುನಾವಣಾ ಯೋಜನಾ ಸಭೆ.ಬೆಂಗಳೂರು, 14 ಜನವರಿ 2023: ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಮತ್ತು ಸರ್ವಜ್ಞನಗರ ವಿಧಾನಸಭೆಗಳಿಗೆ ಸಂಬಂಧಪಟ್ಟ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಸಮಾಲೋಚನೆ ಮತ್ತು ಯೋಜನಾ ಸಭೆಯನ್ನು ಜಂಟಿಯಾಗಿ ಏರ್ಪಡಿಸಲಾಗಿತ್ತು. ಈ ಸಭೆಯ ನೇತೃತ್ವವನ್ನು ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರು ವಹಿಸಿದ್ದರು.ಈ ಸಂದರ್ಭದಲ್ಲಿ ಅಫ್ಸರ್ ಕೊಡ್ಲಿಪೇಟೆ ಅವರು ಮಾತನಾಡಿ ದಶಕಗಳಿಂದ ಎಲ್ಲ ಪಕ್ಷಗಳು ಜನರನ್ನು ವಂಚಿಸಿ ಅವರಿಂದ ಮತ ಪಡೆದು ದ್ರೋಹ ಬಗೆಯುತ್ತ ಬಂದಿದ್ದಾರೆ ಎಂಬುದರ ಬಗ್ಗೆ ವಿವರಿಸಿದರು. ಜೊತೆಗೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಪಕ್ಷಗಳು ಆ ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ನೆರವೇರಿಸಲು ಹೇಗೆ ವಿಫಲರಾಗುತ್ತಾರೆ ಎಂಬುದರ ಬಗ್ಗೆ ಚರ್ಚೆ ನಡೆಸಿದರು.ಈ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಗಳ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ಮತ್ತು ಹೇಗೆ ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಳಿಸಬೇಕು ಎನ್ನುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.ಚುನಾವಣೆಗಳಲ್ಲಿ ಬೂತ್ ಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಅವರು, ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳು ಮತ್ತು ಬೂತ್ ಮಟ್ಟದಲ್ಲಿ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಮಾತನಾಡುತ್ತ ಈ ಕೆಳಗಿನ ಅಂಶಗಳನ್ನು ಚರ್ಚಿಸಿದರು;ಇನ್ನಷ್ಟು ಬೂತ್ ಮಟ್ಟದ ಸಮಿತಿಗಳನ್ನು ರಚಿಸುವುದು.ಹಾಲಿ ಶಾಸಕರ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.ಮತದಾರರ ಪಟ್ಟಿಯಲ್ಲಿ ಅಳಿಸಿ ಹೋಗಿರುವ ಹೆಸರುಗಳನ್ನು ಮರು ಸೇರಿಸಲು ಕ್ರಮ ಮತ್ತು ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು.ಈ ವಿಚಾರಗಳ ಜೊತೆಗೆ ಇನ್ನಷ್ಟು ಚುನಾವಣೆಗೆ ಸಂಬಂಧಪಟ್ಟ ವಿಚಾರಗಳನ್ನು ಸಹ ಈ ಸಭೆಯಲ್ಲಿ ಚರ್ಚಿಸಲಾಯಿತು.ಈ ಸಭೆಯಲ್ಲಿ ಭಾಗವಹಿಸಿದವರು:ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ.ರಾಜ್ಯ ಸಂಘಟನಾ ಕಾರ್ಯದರ್ಶಿ ಮಜೀದ್ ತುಂಬೆ.ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್.ರಾಜ್ಯ ಖಜಾಂಚಿ ನವಾಜ್ ಉಳ್ಳಾಲ್.ಪುಲಿಕೇಶಿ ನಗರ ಅಭ್ಯರ್ಥಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್.ಸರ್ವಜ್ಞನಗರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್.ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಹಾಗೂ ಪುಲಿಕೇಶಿನಗರ ಚುನಾವಣಾ ಉಸ್ತುವಾರಿ ಮುಜಮ್ಮಿಲ್ ಪಾಷಾ.ಸರ್ವಜ್ಞ ನಗರ ಚುನಾವಣಾ ಉಸ್ತುವಾರಿ ಶಕೀಲ್ ಭಾಷಾ.ಮತ್ತು ಚುನಾವಣಾ ಕೋರ್ ಕಮಿಟಿ ಸದಸ್ಯರು. Read More
17 Jan By admin feature, News, Politics✅ ʼʼನ್ಯಾಯಾಧೀಶರ ಆಯ್ಕೆ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗೆ ಸ್ಥಾನ ಇರಬೇಕು ಎನ್ನುವ ಮೋದಿ ಸರ್ಕಾರದ ಬೇಡಿಕೆಯು ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣ ರಾಜಕೀಯಕರಣ ಮಾಡುವ ಬಿಜೆಪಿಯ ಹುನ್ನಾರವಾಗಿದೆ ’’🔻ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ. Read More
17 Jan By admin feature, News, Politicsಶಾಸಕ ತಿಪ್ಪಾರೆಡ್ಡಿ ಲಂಚದ ಆಡಿಯೋ ವಿಚಾರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಬಿಜೆಪಿ ತಿಪ್ಪೆ ಸಾರಿಸೋ ಹೇಳಿಕೆ ಕೊಡೋದು ನಿಲ್ಲಿಸಲಿ. ಬೊಮ್ಮಾಯಿಯವರೇ ತಾಕತ್ತಿದ್ರೆ, ಧಮ್ಮಿದ್ರೆ ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಿ..~ಅಶ್ರಫ್ ಮಾಚಾರ್,ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ Read More
17 Jan By admin feature, News, Politicsನೆನಪಿದೆಯೇ?2016 ರಲ್ಲಿ ಒಕ್ಕೂಟ ಸರಕಾದ ಒಪ್ಪಂದದಂತೆ ಕೇಂದ್ರ ಸಚಿವರಿಂದ ಬಿಡುಗಡೆಯಾಗಿದ್ದ 251 ಸ್ಮಾರ್ಟ್ ಫೋನ್. ಇದರಿಂದಲೂ ಮೋದಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.ಈ ಮುಬೈಲ್ ನೊಂದಣೆ ಮಾಡಿಕೊಂಡವರ ಹಣದ ಲೆಕ್ಕನೂ ಇಲ್ಲ, ಮುಬೈಲ್ ಕೂಡಾ ಇಲ್ಲ. ಇದನ್ನು ಯಾರೂ ಕೇಳಬಾರದು ಕೇಳಿದರೆ ನೀವು ದೇಶ ದ್ರೋಹಿ ಆಗಿಬಿಡುತ್ತೀರಿ..!#ಅಚ್ಛೆದಿನ್||ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ Read More
15 Jan By admin feature, News, Politicsಎಸ್.ಡಿ.ಪಿ.ಐ ಮೈಸೂರು ಜಿಲ್ಲೆ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆ – 2023ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ವತಿಯಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬೂತ್ ಉಸ್ತುವಾರಿಗಳ ಸಭೆಯನ್ನು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಚುನಾವಣಾ ತಂತ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಕ್ಷೇತ್ರದ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು ಸಮಾರೋಪ ಮಾತುಗಳನ್ನು ಆಡಿದರು. ಈ ಸಭೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷ ರಫತ್ ಉಲ್ಲಾ ಖಾನ್, ಜಿಲ್ಲಾ ಪಕ್ಷ ಸಂಘಟನಾ ಕಾರ್ಯದರ್ಶಿ ಆಕ್ರಂ, ಸಂಪನ್ಮೂಲ ವ್ಯಕ್ತಿಯಾಗಿ ಅಪ್ಸರ್ ಹುಣಸೂರು ಹಾಗೂ ಎಲ್ಲ ಬೂತ್ ಸಮಿತಿ ಉಸ್ತುವಾರಿಗಳು ಭಾಗವಹಿಸಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾಟಿ ಆಫ್ ಇಂಡಿಯಾ ಮೈಸೂರು Read More
14 Jan By admin feature, News, Politicsಈ ಹಬ್ಬ ನಾಡಿಗೆ ಶಾಂತಿ ಮತ್ತು ನೆಮ್ಮದಿ ಹೊತ್ತು ತರಲಿ. ರೈತರಿಗೆ ಸಮೃದ್ಧ ಮಳೆ ಬೆಳೆಯ ಮೂಲಕ ಹರ್ಷ ತುಂಬಲಿ ಎಂದು ಆಶಿಸುತ್ತ ನಾಡಿನ ಎಲ್ಲ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ.ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು~ಅಬ್ದುಲ್ ಮಜೀದ್ ಮೈಸೂರು,ರಾಜ್ಯಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ Read More
14 Jan By admin feature, News, Politicsಸಂತಾಪಬುದ್ಧ, ಅಂಬೇಡ್ಕರ್ ಅವರ ಬರಹ ಮತ್ತು ವಿಚಾರಗಳನ್ನು ಸಮಾಜದಲ್ಲಿ ಪಸರಿಸುತ್ತಾ ಜಾಗೃತಿ ಮೂಡಿಸುತ್ತಿದ್ದ ಹೂಡಿ ವೆಂಕಟೇಶ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಕಾರ್ಯ ನಮಗೆಲ್ಲರಿಗೂ ಸ್ಪೂರ್ತಿದಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇನೆ.~ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
14 Jan By admin feature, News, Politicsಸಾಮಾಜಿಕ ಬದ್ಧತೆಯನ್ನು ಬದುಕಿನ ಭಾಗವಾಗಿಸಿಕೊಂಡು ಬುದ್ಧ, ಅಂಬೇಡ್ಕರ್ ತೋರಿದ ಮಾರ್ಗವನ್ನು ಜನರಿಗೆ ಪರಿಚಯಿಸುತ್ತಿದ್ದ ಹೂಡಿ ವೆಂಕಟೇಶ್ ಅವರು ನಿಧನರಾಗಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
14 Jan By admin feature, News, Politicsಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆ ಸಮುದಾಯದ ಮಠಾಧೀಶರಾದ ಜಯಮೃತ್ಯುಂಜಯ ಸ್ವಾಮಿಯವರು ಮುಸ್ಲಿಮರನ್ನು ಎಲ್ಲಿಂದಲೋ ಬಂದವರು ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಹೇಳಿಕೆ.ಅವರು ಈ ಹೇಳಿಕೆಯ ವಿಚಾರವಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಅಭ್ಯರ್ಥಿಗಳು ಎಲ್ಲೆಲ್ಲ ಸ್ಪರ್ಧೆ ಮಾಡುತ್ತಾರೋ ಅಲ್ಲೆಲ್ಲ ಮುಸ್ಲಿಂ ಸಮುದಾಯ ಅವರ ವಿರುದ್ಧ ಮತ ನೀಡಲಿದೆ.ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ Read More
12 Jan By admin feature, News, Politicsವೈಯಕ್ತಿಕ ಜಗಳವನ್ನು ಕೋಮು ಗಲಭೆಯಾಗಿ ಪರಿವರ್ತಿಸಿ ಅದರಿಂದ ರಾಜಕೀಯ ಲಾಭ ಪಡೆಯಲು ಸಾಗರದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಪ್ರಯತ್ನವನ್ನು ಎಸ್ಡಿಪಿಐ ಪಕ್ಷ ಖಂಡಿಸುತ್ತದೆ. ಅದರ ಭಾಗವಾಗಿ ಬಲವಂತವಾಗಿ ಬಂದ್ ಮಾಡಿಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು.ದೇವೇಂದ್ರ ಪಾಟೀಲ್ಜಿಲ್ಲಾ ಉಪಾಧ್ಯಕ್ಷರು,ಎಸ್ಡಿಪಿಐ – ಶಿವಮೊಗ್ಗ Read More