15
Nov

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕೋಮುವಾದಿ ಆಶಯಗಳಿಗೆ ಪೂರಕವಾದ ನಿರ್ಧಾರಗಳನ್ನು ಒಂದೊಂದಾಗಿ ಜಾರಿಗೊಳಿಸುವ ಮೂಲಕ ಮತಗಳನ್ನು ಕ್ರೋಡೀಕರಿಸಲು ಯತ್ನಿಸುತ್ತಿದೆ. ಶಿಕ್ಷಣ ಇಲಾಖೆಯು ಜಾರಿಗೊಳಿಸಿರುವ ಧ್ಯಾನ ಮತ್ತು ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣ ಆದೇಶಗಳೂ ಇದೇ ಮಾದರಿಯಲ್ಲಿದೆ. ಕ್ಲಾಸ್ ರೂಂ ಇಲ್ಲ, ಬುಕ್ ಕೊಡ್ತಿಲ್ಲ, ಬಿಸಿ ಊಟ ಇಲ್ಲ, ಟೀಚರ್ಸ್ ಇಲ್ಲ, ಆ ಬಗ್ಗೆ ಗಮನ ಹರಿಸುವ ಬದಲಾಗಿ ಬಣ್ಣ ಬಳಿಯುತ್ತಾರಂತೆ. ಸರ್ಕಾರದ ಜವಾಬ್ದಾರಿ ಮಕ್ಕಳಿಗೆ ಶಿಕ್ಷಣ ಕೊಡಬೇಕು, ಆದರೆ ಇದರ ಬದಲಾಗಿ ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸಿದ್ದು ಆಯಿತು, ಈಗ ಶಾಲಾ ಕಟ್ಟಡ, ಕೊಠಡಿಗಳನ್ನೂ ಕೇಸರಿಮಯಗೊಳಿಸಿ ಪ್ರತಿ ಹಂತದಲ್ಲಿ ಕೇಸರೀಕರಣ ಮಾಡಲು ಮುಂದಾಗಿರುವುದು ಖಂಡನೀಯ.

~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

Leave A Comment