26
Jan

ಸಾಕಷ್ಟು ತ್ಯಾಗ, ಬಲಿದಾನಗಳ ನಂತರ ಪಡೆದುಕೊಂಡ ಸ್ವಾತಂತ್ರ್ಯವನ್ನು ಶಾಶ್ವತವಾಗಿಸಿಕೊಳ್ಳಲು ದೇಶಕ್ಕೆ ಸಮರ್ಥ ಸಂವಿಧಾನದ ಅವಶ್ಯಕತೆ ಇತ್ತು. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಅದನ್ನು ನಮಗೆ ಒದಗಿಸಿಕೊಟ್ಟರು. ಅದರ ಆಧಾರದಲ್ಲಿ ನಾವು ನಮ್ಮ ಭಾರತ ದೇಶವನ್ನು ಗಣರಾಜ್ಯವಾಗಿ ಘೋಷಿಸಿಕೊಂಡೆವು. ಹಾಗೆ ಸ್ಥಾಪಿಸಲಾದ ದೇಶದಲ್ಲಿ ಇಂದು ನಮ್ಮ ಸಂವಿಧಾನದ ಮೂಲ ಆಶಯಗಳನ್ನು ಫ್ಯಾಸಿಸ್ಟ್ ಶಕ್ತಿಗಳು ದುರ್ಬಲಗೊಳಿಸುತ್ತಿವೆ, ಜಾತ್ಯಾತಿತ ಪರಂಪರೆ ದುರ್ಬಲವಾಗುತ್ತಿದೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಬಲವಾಗಿ ನಿಂತು ಸಂವಿಧಾನದ ಆಶಯಗಳನ್ನು ರಕ್ಷಿಸಿ, ಸಂವಿಧಾನವನ್ನು ಉಳಿಸಬೇಕಿದೆ.

ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರದ ಗದ್ದುಗೆ ಸಾಧಿಸುವ ಮೂಲಕ ಸಂವಿಧಾನದ ಮೇಲೆ ದೊಡ್ಡ ಮಟ್ಟದ ಪ್ರಹಾರ ಮಾಡುತ್ತಿವೆ. ಹಂತ ಹಂತವಾಗಿ ಮನುವಾದವನ್ನು ಹೇರುತ್ತಿವೆ. ಇದೆಲ್ಲದರ ಬಗ್ಗೆ ನಾವು ಜಾಗೃತರಾಗಬೇಕಾದ ಮತ್ತು ಇತರರನ್ನೂ ಜಾಗೃತಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

~ಅಬ್ದುಲ್ ಮಜೀದ್,

ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

Leave A Comment