ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ ಮತ್ತು ಸಂಭ್ರಮವಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಗೌರವ, ನ್ಯಾಯ ಮತ್ತು ಘನತೆಯ ಬದುಕು.
ಸಂವಿಧಾನದ ಭರವಸೆಗಳು ನಿಜವಾಗಿ ಅನುಷ್ಠಾನಗೊಂಡಾಗ ಮಾತ್ರ ಸ್ವಾತಂತ್ರ್ಯ ಸಂಪೂರ್ಣವಾಗುತ್ತದೆ.
ಆದರೆ ಇಂದು ಸರ್ಕಾರವನ್ನು ಪ್ರಶ್ನಿಸುವವರು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಮತ್ತು ಜನರ ಹಕ್ಕುಗಳ ಪರವಾಗಿ ಹೋರಾಡುವವರನ್ನು ಯುಎಪಿಎ ಸೇರಿದಂತೆ ಕಠಿಣ ಕಾನೂನುಗಳಡಿ ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳನ್ನಾಗಿ ಬಂಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವದ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತದೆ.
ಆದ್ದರಿಂದ, ಅನ್ಯಾಯವಾಗಿ ಜೈಲಿನಲ್ಲಿರುವವರಿಗಾಗಿ ಧ್ವನಿ ಎತ್ತುವ ಮೂಲಕ ಸ್ವಾತಂತ್ರ್ಯವನ್ನು ಆಚರಿಸೋಣ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್.ಡಿ.ಪಿ.ಐ ಕರ್ನಾಟಕ
